tag:blogger.com,1999:blog-11789297715894868832024-03-13T08:51:26.242-07:00ನೀಳ್ಜಡೆsumanalaxmishhttp://www.blogger.com/profile/09262148243475906419noreply@blogger.comBlogger15125tag:blogger.com,1999:blog-1178929771589486883.post-5727231721581427112011-12-30T22:54:00.001-08:002011-12-30T23:12:43.394-08:00<span style="font-weight: bold;">ಚಳಿಗೊಂದು ಬಾಲ್ಯದ ಸಲಾಮು</span><br />---------------<br />ದೂರದ ಸ್ವಿಟ್ಜರ್ಲ್ಯಾಂಡ್, ಯುರೋಪ್ ದೇಶಗಳು, ನಮ್ಮದೇ ಕಾಶ್ಮೀರ, ಹಿಮಾಲಯಗಳಿಗೆ ಬದುಕಿನಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂದು ಕನಸುವ ಮಂದಿ ನಾವು. ಅಲ್ಲಿನ ಆಕರ್ಷಣೆ ಬೆಳ್ಳಗಿನ ಹಿಮ. ಬಿಸಿಲು ನಾಡಿನ ನಮಗೆ ಅಲ್ಲಿಯ ಉಗ್ರ ಚಳಿಯ ದಿನಗಳ ಕಷ್ಟ ಗೊತ್ತಿಲ್ಲ. ಹೀಗಾಗಿ ಆಕರ್ಷಣೆ ಹೆಚ್ಚು ಎನ್ನುವ ಸತ್ಯ ಗೊತ್ತಿದ್ದರೂ ಹಿಮ ಸೌಂದರ್ಯದ ಪ್ರತೀಕವಾಗಿಯೇ ಕಾಣುತ್ತದೆ.<br />ಈ ಚಳಿ ಎಂದೊಡನೆ ತಕ್ಷಣ ನೆನಪಾಗುವುದು ಬೆಂಕಿ. ಹಳ್ಳಿಗರಿಗೆ ಈ ಸುಖ ಗೊತ್ತು. ನಮ್ಮ ಮಲೆನಾಡಿನ ಮಂದಿಗಂತೂ ಚಳಿಗಾಲದ ಬೆಂಕಿ ಅತಿ ಆಪ್ತ. ಮಳೆಗಾಲದಲ್ಲಿ ಬೆಂಕಿ ಅನಿವಾರ್ಯವಾದರೆ ಚಳಿಗೆ ಬೆಂಕಿ ಪ್ಯಾಷನ್ ಆಗಿಬಿಡುತ್ತದೆ. ಚಳಿಯ ಮೋಹಕತೆಗೆ ಬೆಂಕಿ ಇನ್ನಷ್ಟು ಕಾವು ನೀಡುತ್ತದೆ. ಹಾಗಂತ ಚಳಿಯ ದಿನಗಳಲ್ಲಿ ಮಲೆನಾಡು ಹೊದ್ದು ಮಲಗಿಬಿಡುವುದಿಲ್ಲ, ವರ್ಷದ ಎಲ್ಲಾ ದಿನಗಳಿಗಿಂತ ಕ್ರಿಯಾಶೀಲವಾಗಿರಬೇಕಾದ ದಿನಗಳು ಇವು. ಏಕೆಂದರೆ ಅಡಕೆ, ಭತ್ತದ ಕೊಯ್ಲು ಇದೆ. ವರ್ಷದ ಒಂದೇ ಒಂದು ಬೆಳೆ ಕೈ ಸೇರುವ ಹೊತ್ತಲ್ಲಿ ಎಷ್ಟು ಚಳಿಯಿದ್ದರೇನು? ಸೋಮಾರಿತನ ಆವರಿಸಲು ಬಿಡುವಂತಿಲ್ಲ.<br />ಡಿಸೆಂಬರ್ನ ಸರಿ ಚಳಿಗಾಲದಲ್ಲಿ ಯಾರ ಮನೆಗೆ ಹೋದರೂ ಅಡಕೆ ಸುಲಿಯುವ ಚಟಪಟ ಸದ್ದು. ಬೆಳಗ್ಗೆ-ಸಂಜೆ ಅಡಕೆ ಒಣಗಿಸುವ ಅಟ್ಟದ ಮೇಲೆ ಬಹುಪಾಲು ಸಮಯ ಕಳೆಯುತ್ತದೆ. ಬಿಸಿಲು ಬರುವ ಹೊತ್ತಿಗೆ ಅಡಕೆ ಒಣಗಿಸುವುದು, ರಾತ್ರಿಯ ಇಬ್ಬನಿಗೆ ತೋಯ್ಯದಿರಲೆಂದು ಮತ್ತೆ ಒಟ್ಟುಗೂಡಿಸಿ ಪ್ಲಾಸ್ಟಿಕ್ಕೋ, ಗೋಣಿತಾಟಿನದ್ದೋ ಹೊದಿಕೆ ಹಾಕುವುದು, ಮತ್ತೆ ಮರುದಿನ ಥಟ್ ಥಟ್ ಎಂದು ತಟ್ಟಿ ತಟ್ಟಿ ಹರವುವುದು...ಸಂಜೆ ಮತ್ತೆ ಒಬ್ಬರಿಸುವುದು. ಹತ್ತಿರದಲ್ಲೇ ಟ್ರಾನ್ಸಿಸ್ಟರ್. ಧಾರವಾಢ ಆಕಾಶವಾಣಿಯಲ್ಲಿ ಸಂಜೆ ೫.೩೦ ಗೆ ಮೂಡಿಬರುವ ‘ಈ ಸೊಗಸಾದ ಸಂಜೆ’ ಹಾಡಿಗೆ ಮೈಮರೆತು ದನಿಗೂಡಿಸುವ ಅಣ್ಣ...<br />ಶಾಲೆಗೆ ಹೋಗುತ್ತಿದ್ದ ದಿನಗಳು ಅವು. ರಸ್ತೆ ಪಕ್ಕದ ಹುಲ್ಲು ಹಾಸಿನ ಮೇಲೆ ಮಣಿಗಳಂತೆ ಪೋಣಿಸಿಕೊಂಡಿರುತ್ತಿದ್ದ ಇಬ್ಬನಿಯನ್ನು ಹಾರಿಸುತ್ತ, ಹಾರಿಸುತ್ತ ಗೊತ್ತೇ ಆಗದಂತೆ ಯೂನಿಫಾರ್ಮ್ ಒದ್ದೆಯಾಗಿ ಹೋಗುತ್ತಿತ್ತು. ಕೆಲವೊಮ್ಮೆ ಆಗಲೇ ಅದನ್ನು ಯಾರೋ ತುಳಿದು ಹೋದ ಮಾರ್ಕು ಕಂಡು ಬೇಸರವಾಗುತ್ತಿತ್ತು. ಅರ್ಧ ಮೈಲು ನಡೆಯುವಷ್ಟರಲ್ಲಿ ಮುಂಗುರುಳು ಮಂಜಿನಲ್ಲಿ ತೋಯ್ದುಹೋಗುತ್ತಿತ್ತು. ರಾತ್ರಿ ಜೇಡ ಕಟ್ಟಿಹೋದ ಬಲೆಗೆ ಮುಖ ಸೋಕಿ ಬಾಯಿಗೆ ಏನೋ ಸಿಹಿ ಸಿಹಿ ಅಂಟಂಟು..ಈ ಸಮಯದಲ್ಲಿ ಬೀಳುವ ಇಬ್ಬನಿಯ್ನು ನೋಡಿಯೇ ಅಪ್ಪ ಹೇಳುತ್ತಿದ್ದ ‘ಈ ಬಾರಿ ಮಾವಿನಕಾಯಿ ಚೆನ್ನಾಗಿ ಕಚ್ಚುತ್ತದೆ’ಎಂದು. ಆದರೆ ಶಿಂಗಾರದೊಳಗೆ ಅಡಗಿ ಕೂತ ಅಡಕೆ ಮರಿಗಳು ಮಾತ್ರ ಬೆಳಗಿನ ಹೊತ್ತು ಪಟಪಟ ಬೀಳುತ್ತಿದ್ದಾಗ ‘ಓಹೋ ಇಬ್ಬನಿ ಹೆಚ್ಚಾಯ್ತು’ಎನ್ನುವರು.<br />ಅಂತಹ ಚಳಿಗಾಲದಲ್ಲೊಂದು ದಿನ ಬೆಳ್ಳಂಬೆಳಗ್ಗೆ ದೇವರಿಗೆ ಹೂವು ಕೊಯ್ದು ಬಂದು ಯೂನಿಫಾರಂಗೆ ಐರನ್ ಮಾಡಲು ಹೋಗಿ ಪೂರ್ತಿ ಸುಟ್ಟುಕೊಂಡಿದ್ದೆ. ಚಳಿಗೆ ಮರಗೆಟ್ಟಿದ್ದ ಕೈಗಳಿಗೆ ಐರನ್ಬಾಕ್ಸ್ ಕಾದ ಸಮಾಚಾರವೇ ಗೊತ್ತಾಗಿರಲಿಲ್ಲ. ಬಿಳಿ ಬಣ್ಣದ ಅಂಗಿಯ ಅರೆ ಸುಟ್ಟುಹೋಗಿದ್ದ ಜಾಗಕ್ಕೆ ಮತ್ತೊಂದು ಅಂಗೈಯಗಲದ ಬಿಳಿ ಬಟ್ಟೆ ಸೇರಿಸಿ ಹೊಲಿದುಕೊಟ್ಟಿದ್ದಳು ಅಮ್ಮ. ಅದರಲ್ಲೇ ಆ ವರ್ಷದ ಶಾಲೆ ಪೂರೈಸಿತ್ತು. ದೇವರ ಪೂಜೆಗೆ ಹೂವು ಸೇರಿಸುವುದು ಮುಂಜಾವಿನ ದೊಡ್ಡ ಕೆಲಸ ಚಳಿಯಲ್ಲಿ. ಗಿಡ-ಮರಗಳು ಚಳಿಯ ಅಬ್ಬರಕ್ಕೆ ಬೆಕ್ಕಸಬೆರಗಾಗಿ ಮೈ ಬರಿದು ಮಾಡಿಕೊಂಡು ನಿಂತುಬಿಡುವಾಗ ಹೂವೆಲ್ಲಿ? ಯಾವಾಗಲೂ ಬಿಡುವ ಪುಟ್ಟ ತುಂಬೆ, ಅಲ್ಲೊಂದು ಇಲ್ಲೊಂದು ಕಾಣುವ ಶಂಖಪುಷ್ಪ, ದೂರ್ವೆ, ತುಳಸಿಯೇ ಗತಿ. ಅದು ಬಿಟ್ಟರೆ ಗದ್ದೆಯಂಚಿಗೆ ಹಿಂಡುಹಿಂಡಾಗಿ ಬೆಳೆದ ಬಳ್ಳಿಯಿಂದ ಅಚ್ಚ ಹಳದಿಯ ಕೋಟೆ ಹೂವು, ಕೆಂಪು ಹಾಗೂ ಗಂಧದ ಬಣ್ಣದ ಬಾಲದಾಸವಾಳ ಕೊಯ್ಯಲು ಹೋಗುವುದು ಭಾನುವಾರ ಮಾತ್ರ. ಅಕ್ಕಪಕ್ಕದ ಮರಗಳನ್ನು ಬಳಸಿ ನಿಂತ ಆ ಹಿಂಡಿನ ಹತ್ತಿರ ಕಷ್ಟಪಟ್ಟು ಹೋದರೆ ಸಿಗುವುದು ನಾಲ್ಕಾರು ಹೂವುಗಳು ಮಾತ್ರ. ಆದರೂ ಕೊಯ್ಯಲೇಬೇಕು.<br />ಸುಲಿದ ಅಡಕೆ ಬೇಯಿಸಲೆಂದು ರಾತ್ರಿ ಹಂಡೆ ನೀರು ಕಾಯಿಸಲು ದೊಡ್ಡ ಉರಿ ಹಾಕಿದ ಅಪ್ಪ ಊಟ ಮುಗಿಸಿ ಬರುವುದರೊಳಗೆ ಅದರ ಎದುರು ಗೋಣಿತಾಟೊಂದನ್ನು ಹಾಕಿ ಅಲ್ಲಿಯೇ ಹೋಂವರ್ಕ್ ಸಂಭ್ರಮ. ಕೌದಿಯಡಿ ಬೆಚ್ಚಗೆ ಮಲಗಿದರೂ ಕೈಕಾಲುಗಳು ಬೆಚ್ಚಗಾಗುವಷ್ಟರಲ್ಲಿ ಉಚ್ಚೆ ಬಂದಂತಾಗಿ, ಹೋಗಿ ಬರುವ ಹೊತ್ತಿಗೆ ಮತ್ತೆ ಕೈಕಾಳುಗಳು ಮರಗಟ್ಟುವ ಆಟ ಶುರುವಾಗಿ ಸಿಹಿ ನಿದ್ದೆ. ಚಳಿಯ ಭಾನುವಾರದ ಚಿತ್ರಣ ಬೇರೆ. ಮಕ್ಕಳು ಶಾಲೆಗೆ ಹೋಗುತ್ತಾರೆಂಬ ಗಡಿಬಿಡಿಯಿಲ್ಲ. ಆದರೂ ಹೊತ್ತಿಗೆ ಸರಿಯಾಗಿ ತಿಂಡಿಯಂತೂ ಆಗುತ್ತಿತ್ತು. ಬಚ್ಚಲೊಲೆಯ ಬೆಂಕಿ ಧಗಿಸುತ್ತಿದ್ದಂತೆ ಅಮ್ಮನ ಎಣ್ಣೆ ಸ್ನಾನದ ಕಾರ್ಯ ಶುರು. ಸೀಗೆಕಾಯಿ ಪುಡಿ, ಮತ್ತಿಲೋಳೆ ಹಾಕಿ ನೆನೆಸಿಟ್ಟ ನೀರು ತಣ್ಣಗೆ ಕೊರೆದು ತಲೆಯಿಂದ ಇಳಿಯುವ ದಾರಿಯಲ್ಲೆಲ್ಲ ಚಿಕ್ಕ ನಡುಕ. ನಂತರ ಹಬೆಯಾಡುವ ಬಿಸಿನೀರಿಗೆ ತಲೆಯೊಡ್ಡಿದರೆ ಅಲ್ಲೇ ಕುಸಿದುಬೀಳುವಷ್ಟು ನಿದ್ರೆ. ಕೂದಲನ್ನು ಒಣಗಿಸುವ ನೆಪವಾಗಿಟ್ಟು ಅಟ್ಟ ಹತ್ತಿ ಬಿಸಿಲಿಗೆ ಕುಳಿತರೆ ತೂಕಡಿಕೆ, ಚಿಕ್ಕ-ಪುಟ್ಟ ಹಕ್ಕಿಗಳ ಚಿಲಿಪಿಲಿ ಸಂಭ್ರಮದ ಜೋಗುಳ.<br />ಚಳಿಯೆಂದರೆ ಒಳಗೆ ಏನೋ ಅರಳುತ್ತದೆ. ಪಕ್ಕಾ ಪ್ರಕೃತಿಯಂತೆ. ಮರವೆಲ್ಲ ಎಲೆಗಳನ್ನುದುರಿಸಿ ಬಟಾಬಯಲಾದರೂ ಅಲ್ಲಿಯೇ ಕೆಂಪು ಕೆಂಪು ಚಿಗುರು ಸಾಲಾಗಿ ಹುಟ್ಟುತ್ತ ಜಗದ ನಿಯಮವನ್ನು ಸಾರುತ್ತವೆ. ಅಂತಹುದ್ದೇ ಕಠೋರ ಚಳಿಯಲ್ಲಿ ಅಜ್ಜ ಮುರುಟಿ ಮುರುಟಿಕೊಂಡೇ ಪ್ರಾಣ ತೆತ್ತಿದ್ದು. ಪದರು ಪದರಾಗಿ, ಸುಕ್ಕಾಗಿದ್ದ ಆತನ ಮೈಕೈ ಚರ್ಮ ಬೆಚ್ಚಗಿದೆ ಎನಿಸುತ್ತಿತ್ತು. ಅವನ ಹಳೆಯ ಶಾಲಿನಡಿ ನಮ್ಮ ಕೈಕಾಲುಗಳನ್ನೂ ತೂರಿಸುತ್ತಿದ್ದೆವು. ಆದರೆ, ಚಳಿಗೆ ಜೀವ ಮರಗಟ್ಟುತ್ತಿದೆ ಎಂದು ಹೊತ್ತಾಗಲೇ ಇಲ್ಲ. ಅಂವ ದಮ್ಮು ಹೆಚ್ಚಾಗಿ ಕೆಮ್ಮುತ್ತಿದ್ದ ದಿನಗಳನ್ನೂ ಚಳಿಗಾಲ ಅಡಗಿಸಿಟ್ಟುಕೊಂಡಿದೆ. ಸಂಜೆ ಆರಕ್ಕೆ ಪ್ರಾಣ ಬಿಟ್ಟ ಅಜ್ಜನಿಗೂ, ಅದೇ ದಿನ ಸಂಜೆ ೬.೩೦ ಗೆ ಅತ್ತಿಗೆಯ ಹೊಟ್ಟೆಯಿಂದ ಜನ್ಮ ತಳೆದ ಪಾಪು ಪುಟ್ಟಿಗೂ ಚಳಿಗಾಲದ ಮುಹೂರ್ತ ನಿಕ್ಕಿಯಾಗಿದ್ದು ಯಾವ ಮಾಯೆಯೋ?<br />ಅಪ್ಪನ ಆರೋಗ್ಯವಂತೂ ಕೈಕೊಡುವುದು ಯಾವತ್ತೂ ಚಳಿಗಾಲದಲ್ಲಿಯೆ. ನಾನಾಗ ಎಸ್ಎಸ್ಎಲ್ಸಿಯಲ್ಲಿದ್ದ ಸಮಯ. ರಕ್ತದ ವಾಂತಿ ಮಾಡಿಕೊಳ್ಳುತ್ತ ಬಸ್ಸ್ಟಾಪಿನಲ್ಲಿ ಅನಾಥವಾಗಿ ಮಲಗಿಕೊಂಡಿದ್ದ ಅಪ್ಪನನ್ನು ಕಂಡ ಯಾರೋ ಪುಣ್ಯಾತ್ಮರು ಮನೆಗೆ ಕರೆತಂದಿದ್ದರು. ಆಗ ಎಚ್ಚರವಾದಾಗ ನನ್ನ ಬೆನ್ನು ಸವರಿ ‘ನೀವಿನ್ನೂ ಚಿಕ್ಕವರು’ಎಂದು ಆಸ್ಪತ್ರೆಗೆ ಹೋಗಿದ್ದ ಅಪ್ಪನ ಮುಖಭಾವ ಇನ್ನೂ ಮರೆತಿಲ್ಲ. ಅದಾಗಿ ಕೆಲವು ವರ್ಷಗಳ ಬಳಿಕ ನಾನು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ಹಾರುವ ಸಂಭ್ರಮದಲ್ಲಿದ್ದೆ. ಅದನ್ನು ಮನೆಗೆ ಫೋನ್ ಮಾಡಿ ಹೇಳಿಯೂ ಇದ್ದೆ. ಅಪ್ಪನೂ ಖುಷಿಪಟ್ಟಿದ್ದ. ನಾಳೆ ಇನ್ನೇನು ಡ್ಯೂಟಿಗೆ ಜಾಯಿನ್ ಆಗಬೇಕು, ಅವತ್ತು ಹಿಂದಿನ ರಾತ್ರಿ ಅಪ್ಪನಿಗೆ ಬಿಪಿ ಹೆಚ್ಚಾಗಿ ಪಾರ್ಶ್ವವಾಯು ಬಂದು ಅಪ್ಪಳಿಸಿತ್ತು. ದುರಂತವೆಂದರೆ, ನನಗೆ ಗೊತ್ತಾಗಿದ್ದುದು ಸಹ ಮರುದಿನವೆ. ಆಗ ತಕ್ಷಣ ಊರಿಗೆ ಹೋಗದೆ ಕರ್ತವ್ಯದಿಂದ ಹಿಂದೆ ಉಳಿದೆ ಎಂದು ಈಗಲೂ ಕೆಲವೊಮ್ಮೆ ಕಾಡುತ್ತದೆ. ಈಗ ಅಪ್ಪ ಸುಧಾರಿಸಿಕೊಂಡಿದ್ದಾನೆ. ಆದರೂ ಚಳಿಯೆಂದರೆ ಜೀವಕ್ಕೆ ಹಿಂಸೆಯಾಗುತ್ತದೆ ಎನ್ನುತ್ತಾನೆ. ಎಷ್ಟೊಂದು ಆಯಾಮಗಳು ಚಳಿಗೆ!<br />ಇತ್ತೀಚೆಗೆ ಮಲೆನಾಡಿನ ಚಿತ್ರಣ ಬದಲಾಗಿದೆ. ಮನೆಗಳಲ್ಲಿ ಆಡುವ ಮಕ್ಕಳು ಕಡಿಮೆ. ರಟ್ಟೆ ಮುರಿದು ಕೆಲಸ ಮಾಡುವ ಯುವ ಪೀಳಿಗೆಯಂತೂ ಇಲ್ಲವೇ ಇಲ್ಲ. ಪ್ರತೀ ಮನೆಯಲ್ಲೂ ವಯಸ್ಸಾದವರು ನಿಧಾನ ಓಡಾಡಿಕೊಂಡು ಬಿಸಿಲು ಬರುತ್ತಿದ್ದಂತೆ ‘ಸ್ವಲ್ಪ ಚಳಿ ಕಾಯಿಸಿ ಮುಂದಿನ ಕೆಲಸ ನೋಡೋಣ’ ಎನ್ನುತ್ತಾರೆ. ಭಾನುವಾರವಾದರೆ ಅಷ್ಟೊತ್ತಿಗೆ ಬೆಂಗಳೂರಿನಲ್ಲಿರುವ ಮಗಳ ಫೋನ್ ಕರೆದಿರುತ್ತದೆ. ಮೊಮ್ಮಕ್ಕಳೊಡನೆ ಮಾತನಾಡಿ ಬರುವಷ್ಟರಲ್ಲಿ ಬಿಸಿಲು ನೆತ್ತಿಗೇರಿರುತ್ತದೆ.<br />ಅಷ್ಟಕ್ಕೂ ಮಲೆನಾಡಿನಲ್ಲೀಗ ವರ್ಷದ ಆರು ತಿಂಗಳು ಮಳೆಗಾಲ. ಈ ವಾತಾವರಣ ಕಳೆದ ನಾಲ್ಕು ವರ್ಷಗಳಿಂದ ಕೊಡುಗೆಯಾಗಿ ಬಂದಿದೆ. ಇದಕ್ಕೆ ವೈಜ್ಞಾನಿಕ ಕಾರಣ ಯಾರಿಗೂ ಗೊತ್ತಿಲ್ಲ. ಸ್ಥಳೀಯರು ಮಾತ್ರ ಒಬ್ಬೊಬ್ಬರು ಒಂದೊಂದು ಕತೆ ಹೇಳುತ್ತಾರೆ. ‘ಕೈಗಾ ಪರಮಾಣು ಸ್ಥಾವರ ಬಂದ ಮೇಲೆ ಹೀಗಾಯ್ತು’ಅನ್ನುವವರೂ ಇದ್ದಾರೆ. ಒಟ್ಟಿನಲ್ಲಿ ಹಿಂದಿನ ಚಳಿಗಾಲದ ಕಾವು ಎದೆಯಲ್ಲಿ ಮೂಡುವುದಿಲ್ಲ. ಮಳೆ ಇಲ್ಲದ ದಿನಗಳನ್ನು ನೋಡಿಕೊಂಡು ಗದ್ದೆ ಕೊಯ್ಯುವ, ಭತ್ತದ ತೆನೆ ಬಿಡಿಸುವ, ಅಡಕೆ ಕೊಯಿಸುವ ಕೆಲಸ ಮಾಡುತ್ತಾರೆ. ಗದ್ದೆಯಲ್ಲಿರುವ ಭತ್ತದ ತೆನೆಗಳು ನೀರಿನ ರಾಶಿಯಲ್ಲಿ ಮುಳುಗಿ ಹೋದರೆ, ತೇಲಿ ಹೋದರೆ ‘ಏನ್ ಮಾಡಲಿಕ್ಕೆ ಬರುತ್ತದೆ, ನಮ್ ಗ್ರಹಚಾರ’ಎಂದು ಕೂರುತ್ತಾರೆಯೇ ವಿನಾ ಪರಿಹಾರಕ್ಕಾಗಲಿ, ನಿರಂತರ ಅಕಾಲ ಮಳೆಗೆ ಕಾರಣವೇನೆಂದು ವ್ಯವಸ್ಥಿತ ಅಧ್ಯಯನ ಮಾಡುವಂತೆ ಆಗಲಿ ಯಾರ ಮೇಲೆಯೂ ಒತ್ತಡ ಹೇರುವುದಿಲ್ಲ. ಅದೆಲ್ಲ ಇಲ್ಲಿ ಸಾಧ್ಯವಿಲ್ಲವೆಂಬುದು ಅವರ ದೃಢ ನಿರ್ಧಾರ.<br /><span style="font-weight: bold;">ಚಳಿಗಾಲದ ‘ಟೈಟಾನಿಕ್’</span><br />ಟೈಟಾನಿಕ್ ಚಿತ್ರ ನೋಡಿದ್ದೀರಾ? ಅದಕ್ಕೂ, ಚಳಿಗಾಲದ ಭಾವನೆಗಳಿಗೂ ನಿಕಟ ಸಂಪರ್ಕ ಇದೆ. ಆ ಚಿತ್ರವನ್ನು ಚಳಿಗಾಲದ ತಣ್ಣಗಿನ ವಾತಾವರಣದಲ್ಲಿ ನೋಡಿದಾಗ ಮಾತ್ರ ಅಲ್ಲಿನ ಹಿಮ ಕೊರೆತದ ಗಾಢಾನುಭವವಾಗಲು ಸಾಧ್ಯ. ಯಾವುದೇ ರೋಮ್ಯಾಂಟಿಕ್ ಭಾವ ಮೂಡದ ಹೊತ್ತಲ್ಲಿ ‘ಟೈಟಾನಿಕ್’ ನೋಡಿದ್ದ ನನಗೆ ಆ ಹಿಮ ಸಮುದ್ರದ ಚಳಿಯೇ ಭಯಂಕರವಾಗಿ ಕಾಡಿತ್ತು. ಪ್ರೇಮಿಗಳು ದೂರವಾದ ದುಃಖಕ್ಕಿಂತ ಮಿಗಿಲಾಗಿ ‘ಪಾಪ, ಅವರೆಲ್ಲ ಆ ಚಳಿಯಲ್ಲಿ, ಕೊರೆಯುವ ನೀರಿನಲ್ಲಿ ಹೇಗಿದ್ದರು?’ಎನ್ನುವುದೇ ದೊಡ್ಡ ವಿಚಾರವಾಗಿತ್ತು. ಹೀಗಾಗಿ, ಕೊರೆಯುವ ಹಿಮ ನೀರಿನ ಅನುಭವ ಗಾಢವಾಗಿ ಮನ ತಟ್ಟಬೇಕೆಂದರೆ ಚಳಿಗಾಲದಲ್ಲೇ ‘ಟೈಟಾನಿಕ್’ ಚಿತ್ರ ನೋಡಬೇಕು ಎನ್ನುವುದು ಇಂದಿಗೂ ನನ್ನ ಬಲವಾದ ನಂಬುಗೆ.<br />ಚಳಿಗಾಲದ ಬಂಧವೇನಿದ್ದರೂ ಈಗ ನೆನಪು ಮಾತ್ರ. ದಿನವಿಡೀ ಎ.ಸಿ.ರೂಮಿನಲ್ಲಿ ಕುಳಿತುಕೊಳ್ಳುವ ನನಗೆ ಕಾಲದ ಪರಿವೆಯಿಲ್ಲ. ಋತುಮಾನಗಳ ವಿಭಿನ್ನ ಸೊಬಗನ್ನಂತೂ ಕೇಳಲೇಬೇಡಿ. ಊರಿಂದ ಫೋನ್ ಮಾಡುವ ಅಮ್ಮ ‘ಕೆಂಪು ಹರಿವೆ ಚೆನ್ನಾಗಿ ಮೊಳಕೆ ಒಡೆಯುತ್ತಿದೆ’ಎಂದರೂ ಅಷ್ಟೆ, ‘ಊರಿನ ಬಸ್ಸ್ಟಾಪ್ ಎದುರೇ ಇರುವ ಎರಡೆರಡು ದೈತ್ಯ ಅರಳೀಮರಗಳು ಕೆಂಪಗೆ ಅರಳಿಕೊಂಡಿವೆ’ಎಂದರೂ ಅಷ್ಟೆ. ಅವಳ ಉತ್ಸಾಹ ಇಲ್ಲಿಯವರೆಗೆ ಹರಿಯವುದಿಲ್ಲ.sumanalaxmishhttp://www.blogger.com/profile/09262148243475906419noreply@blogger.com1tag:blogger.com,1999:blog-1178929771589486883.post-19488355129677074772011-05-22T02:20:00.001-07:002011-05-22T02:24:13.085-07:00ನೆಲೆನನ್ನವನ ತೃಪ್ತಿ ಸಮಾಧಾನಗಳಲ್ಲಿ<br />ನಾನು ಕಾಣುವ ಕೊರತೆ<br />ನನ್ನ ಆಕಾಶದೆತ್ತರದ ಬಯಕೆಗಳಿಗೆ<br />ಅವನು ತೋರುವ ನಿರ್ಲಿಪ್ತತೆ<br />ಸದಾ ಹೊಸತರ ಬೆರಗನ್ನು ಬಯಸುವ<br />ನನ್ನ ಕಣ್ಣುಗಳು<br />ಏನೋ ಪಡೆದ ಆರಾಮದಲ್ಲಿ<br />ಕಳೆಗಟ್ಟುವ ಅವನ ಕಣ್ಣುಗಳು<br />ಎಲ್ಲದರಲ್ಲಿಯೂ ಕೊಂಕು<br />ಹುಡುಕುವ ಅವನು<br />ಜಗತ್ತಿನ ಹಸಿರೆಡೆಗೆ ದೃಷ್ಟಿ<br />ಹಾಯಿಸುವ ನಾನು....<br />ಎಲ್ಲೆಲ್ಲೂ ತಾಳಮೇಳವಿಲ್ಲದೇ ನಾ ಬಳಲಿದಾಗ<br />ಅವನೇ ತೋರಿಸುತ್ತಾನೆ<br />‘ಅಲ್ಲಿ ನೋಡು ಚಂದಿರ’.<br /><br />ಯಾವುದು ಭರತ?<br />ಯಾವುದು ಇಳಿತ?<br />ನನ್ನ ಕನಸುಗಳೆತ್ತರ ಅವನು ಏರುವುದೋ?<br />ಅವನ ಶಾಂತಿಗೆ ನಾನು ತಲೆಬಾಗುವುದೋ?sumanalaxmishhttp://www.blogger.com/profile/09262148243475906419noreply@blogger.com0tag:blogger.com,1999:blog-1178929771589486883.post-15202426831765077942011-05-22T02:12:00.000-07:002011-05-22T02:15:16.328-07:00<span style="font-weight: bold;">ಮಗುವಾದ ಬಳಿಕ ಸ್ಮಾರ್ಟ್</span><br />‘ಒಂದು ಮಗು ಆಗಿದ್ದೇ ಆಗಿದ್ದು, ಎಷ್ಟು ಸೋಮಾರಿಯಾಗಿ ಜೀವನ ಕಳೆಯುತ್ತಿದ್ದ ಆಕೆ ಹೇಗೆ ಆಕ್ಟಿವ್ ಆಗಿಬಿಟ್ಟಿದ್ದಾಳೆ? ಇದೇ ಮಗುವಿನ ಮಹಿಮೆ’ ಎಂಬ ಡೈಲಾಗ್ ಅನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಆದರೆ, ಸ್ವಾಮಿ, ಅದು ಮಗುವಿನ ಮಹಿಮೆಯಲ್ಲ, ಅದು ಮೆದುಳಿನಲ್ಲಾದ ಬದಲಾವಣೆ.<br />ಮಗುವಾದ ಬಳಿಕ ಮಹಿಳೆ ಮೊದಲಿನಂತೆ ಇರಲು ಸಾಧ್ಯವೇ ಇಲ್ಲ ಬಿಡಿ. ಅದು ಎಲ್ಲರಿಗೂ ಗೊತ್ತು. ಮೊದಲಿನಂತೆ ಸೊಂಪಾಗಿ ನಿದ್ದೆ ಹೊಡೆಯಲು, ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸಲು ಆಗುವುದಿಲ್ಲ. ಬೇರೆಯವರನ್ನು ಅಷ್ಟೇ ಏಕೆ, ಗಂಡನನ್ನೂ ಸಹ ಸರಿಯಾಗಿ ವಿಚಾರಿಸಿಕೊಳ್ಳಲು ಆಗುವುದಿಲ್ಲ. ಅಷ್ಟು ಕೆಲಸದ ಹೊರೆ ಆಕೆಗೆ ಇರುತ್ತದೆ. ಇನ್ನು ಹೊರಗೆ ಕಚೇರಿಯಲ್ಲಿ ದುಡಿಯುವ ಮಹಿಳೆಯ ಪಾಡಂತೂ ಇನ್ನೂ ಗಂಭೀರ.<br />ಆದರೆ, ಇಷ್ಟೆಲ್ಲ ಜವಾಬ್ದಾರಿ ಹೊತ್ತುಕೊಳ್ಳುವ, ಕೆಲಸ ಮಾಡುವ ತಾಕತ್ತು ಆಕೆಗೆಲ್ಲಿಂದ ಬರುತ್ತದೆ? ಗೊತ್ತಾ? ಅದೇ ನಿಜವಾದ ಆಕೆಯ ಶಕ್ತಿಯ ಗುಟ್ಟು.<br />ಗರ್ಭಿಣಿಯಿದ್ದಾಗ ಹಾರ್ಮೋನ್ಗಳಲ್ಲಿ ಆಗುವ ಬದಲಾವಣೆಗಳಿಂದ ಮಗು ಹುಟ್ಟಿದ ಬಳಿಕ ಮಹಿಳೆಯ ಮೆದುಳಿನ ನಿರ್ದಿಷ್ಟ ಭಾಗ ಸ್ವಲ್ಪ ದೊಡ್ಡದಾಗುತ್ತದೆ. ಅದರಿಂದಲೇ ಇಷ್ಟೆಲ್ಲ ಸಾಧ್ಯವಾಗುತ್ತದೆ.<br />ಕ್ರಿಯಾಶೀಲವಾಗಿ ಚಿಂತಿಸುವ, ಸೂರ್ತಿ ಪಡೆಯುವ, ನ್ಯಾಯಅನ್ಯಾಯಗಳ ವಿವೇಚನೆ ಮಾಡುವ ಹಾಗೂ ತೃಪ್ತಿ ಕಾಣುವ ಮೆದುಳಿನ ಭಾಗ ಹೆರಿಗೆ ನಂತರದ ದಿನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳವಣಿಗೆ ಆಗುತ್ತದೆ. ಇದನ್ನು ಯೇಲ್ ವಿಶ್ವವಿದ್ಯಾಲಯದ ತಜ್ಞರು ಪತ್ತೆ ಮಾಡಿದ್ದಾರೆ. ಹೀಗಾಗಿ ಎಲ್ಲವನ್ನೂ ನಿಭಾಯಿಸುವ, ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುವ ತಾಕತ್ತು ಆಕೆಗೆ ಬರುತ್ತದೆ.<br />ಹಾಗಾದ್ರೆ, ಸುಮ್ಮನೆ ತನ್ನ ಪಾಡಿಗೆ ತಾನಿರುವ, ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ಹುಡುಗಿ ನೋಡಿ ‘ಮಗುವಾದರೆ ಎಲ್ಲ ಸರಿ ಹೋಗುತ್ತೆ ಬಿಡಿ’ಎಂದು ರಾಗ ಹಾಡುವ ಹಿರಿಯರಿಗೆ ಈ ಗುಟ್ಟು ಗೊತ್ತಿದೆಯಾ? ಏನೋ ಗೊತ್ತಿಲ್ಲ.<br /><br />ಫುಲ್ ಖುಷ್!<br />ಮಗುವಾದ ಬಳಿಕ ಅಮ್ಮ ಹೆಚ್ಚು ಸ್ಮಾರ್ಟ್ ಆಗುತ್ತಾಳೆ ಅಂತ ಒಂದು ಸಮೀಕ್ಷೆ ಹೇಳ್ತಾ ಇದ್ರೆ, ಇನ್ನೊಂದು ಅಧ್ಯಯನ ಆಕೆ ಹೆಚ್ಚು ಸಂತಸವಾಗಿಯೂ ಇರ್ತಾಳೆ ಅಂತ ಹೇಳ್ತಾ ಇದೆ. ಗೊತ್ತಾ?<br />ಮಗುವಿನ ಲಾಲನೆ-ಪಾಲನೆಯಲ್ಲಿ ನಿರತರಾಗುವ ಅಮ್ಮನ ಮೆದುಳು ಸಂತಸದಿಂದ ಬೀಗುತ್ತದೆಯಂತೆ. ಅದಕ್ಕೇ ಸಂತಸದ ಹಾರ್ಮೋನ್ ಹೆಚ್ಚಾಗಿ ಸ್ರವಿಕೆ ಆಗುತ್ತದೆಯಂತೆ. ಹಾಗಂತ ಬಿಹೇವಿಯರಲ್ ನ್ಯೂರೋ ಸೈನ್ಸ್ ಪತ್ರಿಕೆ ವರದಿ ಮಾಡಿದೆ.<br />ಮಗುವಿನ ಜವಾಬ್ದಾರಿ ಒಂದೆಡೆಯಾದರೆ, ಅದರ ಹತ್ತಾರು ಕೆಲಸ ಇನ್ನೊಂದೆಡೆ ಇರುತ್ತದೆ. ಆದರೂ ಆಕೆ ಬೇಸರಿಸಿಕೊಳ್ಳುವುದಿಲ್ಲ. ಮತ್ತು ಮಗುವಿನ ಪ್ರತೀ ಕೆಲಸ ಮಾಡುವಾಗಲೂ ಒಂದು ರೀತಿಯ ಸಂತಸ ಅನುಭವಿಸುತ್ತಾಳೆ. ಇದೇ ಆಕೆ ಹೆಚ್ಚು ಕಾಲ ಖುಷಿಯಾಗಿ ಇರುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.sumanalaxmishhttp://www.blogger.com/profile/09262148243475906419noreply@blogger.com0tag:blogger.com,1999:blog-1178929771589486883.post-14370560156124313102011-05-22T02:11:00.001-07:002011-05-22T02:12:20.234-07:00<span style="font-weight: bold;">ನಾವೆಷ್ಟು</span><span style="font-weight: bold;"> </span><span style="font-weight: bold;">ಬೇಗ</span><span style="font-weight: bold;"> </span><span style="font-weight: bold;">ಮೋಸ</span><span style="font-weight: bold;"> </span><span style="font-weight: bold;">ಹೋಗುತ್ತೇವೆ</span><span style="font-weight: bold;">?</span><br />ಆತ ಕ್ರಿಯಾಶೀಲ ಪ್ರಯೋಗಶಾಲಿ. ಹೆಸರು ಈಗಲ್ ರಾಕ್ ಜ್ಯೂನಿಯರ್ ಹೈ. ಪ್ರಯೋಗ ಮಾಡುತ್ತಲೇ ಇರುವುದು ಸ್ವಭಾವಸಿದ್ಧ ಹವ್ಯಾಸ.<br />ಜಂಕ್ಫುಡ್ ಹಾಗೂ ಕೆಲವು ರಸಾಯನಿಕಗಳ ಬಗ್ಗೆ ನಾವೆಷ್ಟು ಸೂಕ್ಷ್ಮರಾಗಿದ್ದೇವೆ ಎನ್ನುವುದನ್ನು ಆತ ಸಾಬೀತುಪಡಿಸಿದ ಆತನ ಪ್ರೊಜೆಕ್ಟ್ಗೆ ಪ್ರತಿಷ್ಠಿತ ಇಡಾಹೋ ಫಾಲ್ಸ್ ಸೈನ್ಸ್ ಫೇರ್ನಲ್ಲಿ ಮೊದಲ ಬಹುಮಾನ ಬಂತು.<br />ಆತನ ಪ್ರೊಜೆಕ್ಟ್ ವಿವರ ಹೀಗಿದೆ.<br />* ಒಂದು ರಸಾಯನಿಕವಿದೆ. ಅದರ ಹೆಸರು ಡಿಹೈಡ್ರೊಜೆನ್ ಮೊನೊಕ್ಸೈಡ್. ಅದರ ಹಾನಿಗಳು ಅಪಾರ.<br />* ಇದರಿಂದ ಅತಿಯಾದ ಬೆವರು ಬರುತ್ತದೆ ಮತ್ತು ವಾಕರಿಕೆಯೂ ಹೆಚ್ಚು.<br />* ಆಸಿಡ್ ಮಳೆಯಲ್ಲಿ ಇದರ ಅಂಶವೇ ಹೆಚ್ಚು.<br />* ಇದರೊಂದಿಗೆ ಇತರ ಅಂಶಗಳು ಸೇರಿದರೆ ಅನೇಕ ರೋಗಗಳೂ ಬರಬಹುದು.<br />* ಅಕಸ್ಮಾತ್ತಾಗಿ ಉಸಿರಿನೊಳಗೆ ಸೇರಿದರೆ ಸಾವು ಗ್ಯಾರೆಂಟಿ.<br />* ಭೂಸವೆತಕ್ಕೂ ಇದು ಪ್ರಮುಖ ಕಾರಣ.<br />* ಆಟೊಮೊಬೈಲ್ನ ಕಾರ್ಯಕ್ಷಮತೆ ಕುಂದಲು ಇದೇ ಕಾರಣ.<br />* ಕ್ಯಾನ್ಸರ್ ಗಡ್ಡೆಗಳಲ್ಲೂ ಇದು ಇರುತ್ತದೆ.<br /><br />ಈಗ ಹೇಳಿ. ಈ ರಸಾಯನಿಕವನ್ನು ನಿಷೇಸುವುದೋ ಬೇಡವೋ ಎಂದು ಆತ ೫೦ ಜನರನ್ನು ಪ್ರಶ್ನಿಸಿದಾಗ ೪೩ ಮಂದಿ ನಿಷೇಸುವುದಕ್ಕೆ ಸಹಮತ ಸೂಚಿಸುತ್ತಾರೆ. ೬ ಮಂದಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನುಳಿದ ಒಬ್ಬರಿಗೆ ಮಾತ್ರ ಆ ಗುಟ್ಟು ಗೊತ್ತಿರುತ್ತದೆ.<br />ಅಷ್ಟಕ್ಕೂ ಆ ರಸಾಯನಿಕ ಯಾವುದು ಗೊತ್ತಾ? ನೀರು. ಈ ಪ್ರೊಜೆಕ್ಟ್ಗೇ ಆತ ಮೊದಲ ಬಹುಮಾನ ಪಡೆದಿದ್ದು. ಅದರ ಟೈಟಲ್ ‘ನಾವೆಷ್ಟು ಬೇಗ ಮೋಸ ಹೋಗುತ್ತೇವೆ?’ಎಂದು.sumanalaxmishhttp://www.blogger.com/profile/09262148243475906419noreply@blogger.com0tag:blogger.com,1999:blog-1178929771589486883.post-31403395077551306852011-04-29T03:20:00.000-07:002011-04-29T03:22:28.228-07:00ನನ್ನ ನಗುಕಾಡುವ ನೆನಪೀಗ ಬೆಂಕಿಯಾಗುವುದಿಲ್ಲ.<br />ಅವನ ಸನಿಹ ಇದ್ದರೂ ಆಯಿತು..ಇಲ್ಲದಿದ್ದರೂ ಸರಿ.<br />ಮಗುವಿನ ಸರಿಹೊತ್ತಿನ ನಗು ಕಾಣಿಸುವುದಿಲ್ಲ.<br />ದಡ ಮುಟ್ಟುವವರೆಗೆ ದನಿಯೆತ್ತದ ನಿಯಮ ನಾನೇ ಹೇರಿಕೊಂಡಿದ್ದು.<br />ಗೆಳತಿಯ ಆರೈಕೆ ಮನತಟ್ಟುವುದಿಲ್ಲ.<br />ನಗುವಿಗೆ ಗಟ್ಟಿ ಕಾರಣಗಳೇ ಬೇಕು.<br /><br />ಕಳೆದುಕೊಂಡಿದ್ದೇನೆ..ನೆನಪುಗಳ<br />ಅರ್ಥವಾಗದ ಮಾತು-ಮೌನದ ಸುತ್ತ ಬೆಸೆವ ಬಂಧಗಳ<br />ಅದು ಸೃಜಿಸುವ ಭಾವಗಳ.<br />ನಗುತ್ತ, ನಗಿಸುತ್ತ ಹಗುರವಾಗುವ ನೋವುಗಳ.<br />ಕಳೆದುಹೋಗಿದ್ದೇನೆ..ಸತ್ಯಕ್ಕೆ<br />ಮುಖ ಕೊಡುವ ಧೈರ್ಯ ನನ್ನಲ್ಲಿಲ್ಲ.<br />ಮಧುರ ಭಾವ..ನನ್ನೀಗ ಕಂಗೆಡಿಸುವುದಿಲ್ಲ.sumanalaxmishhttp://www.blogger.com/profile/09262148243475906419noreply@blogger.com1tag:blogger.com,1999:blog-1178929771589486883.post-9563893976417137732011-04-20T04:22:00.000-07:002011-04-20T04:23:10.607-07:00ಅಮ್ಮ ನೀ ದೇವರುಮೈಕ್ರೊಸಾಫ್ಟ್ ಧೋನಿ!<br />---------------<br />ಅಮ್ಮಾ...ನೀ ನನ್ನ ದೇವರು<br /><br />ಮಕ್ಕಳಿಗೆ ಅಮ್ಮನ ಮಾತೆಂದರೆ ವೇದವಾಕ್ಯ. ಅದು ಸರಿಯೋ, ತಪ್ಪೋ, ಸುಳ್ಳೋ, ಸತ್ಯವೋ ಎಂಬ ಅರಿವು ಅವರಿಗೆ ಇರುವುದಿಲ್ಲ. ಒಟ್ಟಿನಲ್ಲಿ ಅಮ್ಮ ಏನಾದರೂ ಹೇಳಿದಳೆಂದರೆ, ಅದನ್ನು ಪಾಲಿಸಬೇಕು ಅಷ್ಟೇ.<br />ಕೆಲವು ಮಕ್ಕಳು ಇದಕ್ಕೆ ವ್ಯತಿರಿಕ್ತರಾಗಿರ್ತಾರೆ ಅದು ಬೇರೆ ವಿಚಾರ. ಆದರೆ, ಸಾಮಾನ್ಯವಾಗಿ ಅಮ್ಮ ಏನಾದರೂ ಹೇಳಿದಳೆಂದರೆ ಅದು ಪರಮ ಸತ್ಯವೆಂದೇ ಮಕ್ಕಳು ತಿಳಿಯುತ್ತಾರೆ. ಅಲ್ವೇ?<br />ಅಮ್ಮನ ಮಾತನ್ನು ಮೀರಲಾಗದೇ ಮಕ್ಕಳು ವರ್ತಿಸುವ ಬಗ್ಗೆ ಇಲ್ಲೆರಡು ಸನ್ನಿವೇಶಗಳಿವೆ. ಅದನ್ನು ಓದಿದ ಬಳಿಕ ಮಕ್ಕಳಿಗೆ ಹೇಗೆ ವಿಷಯ ಮನದಟ್ಟು ಮಾಡಿಕೊಡಬೇಕೆಂದು ನೀವೇ ಯೋಚಿಸಿ.<br />ಘಟನೆ ಒಂದು<br />ಒಮ್ಮೆ ಐದು ವರ್ಷದ ಪುಟ್ಟ ಮಗು ಶ್ರೇಯಾಳಿಗೆ ಯಾವುದೋ ಆರೋಗ್ಯ ಸಮಸ್ಯೆ ಉಂಟಾಗಿತ್ತು. ವೈದ್ಯರ ಶಿಫಾರಸು ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಬೇಕೆಂದು ಅವಳ ಅಮ್ಮ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಲು ವೈದ್ಯರು ಬಂದರು. ಆದರೆ, ಶ್ರೇಯಾ ಇನ್ನೂ ಏನೇನೋ ಆಟವಾಡುವ ವಿಚಾರದಲ್ಲೇ ಇದ್ದಳು.<br />ಆಗ ಅವಳ ಅಮ್ಮ ‘ಸುಮ್ಮನಿರು. ಸ್ಕ್ಯಾನ್ ಮಾಡಿಸುವಾಗ ಏನೆಂದರೆ ಏನೂ ಚಲನೆ ಮಾಡಬಾರದು. ಸುಮ್ಮನೆ ಮಲಗಿಕೊ’ಎಂದರು. ಅವಳಿಗೆ ಹೆಚ್ಚು ಎಚ್ಚರ ಮೂಡಿಸಬೇಕೆಂದು ಪದೇ ಪದೇ ‘ಹಾಗೇಯೇ ಮಲಗು. ತಲೆ ಅಲ್ಲಾಡಿಸಬೇಡ. ಬೆರಳುಗಳನ್ನು ಸಹ ಅಲ್ಲಾಡಿಸಬೇಡ’ಎಂದು ಹೇಳುತ್ತಾ ಉಳಿದರು.<br />ಅಲ್ಲಿ ಸೈಲೆನ್ಸ್ ಇತ್ತು ಎಷ್ಟೆಂದರೆ, ಉಸಿರಾಡಿಸುವುದೂ ಸಹ ಕೇಳುವಷ್ಟು. ಮಶಿನ್ ಸದ್ದು ಬಿಟ್ಟು ಬೇರೆ ಯಾವ ಸದ್ದೂ ಅಲ್ಲಿರಲಿಲ್ಲ. ಆಗ ಕೆಲವು ಸೆಕೆಂಡ್ಗಳ ಕಾಲ ಸುಮ್ಮನಿದ್ದ ಶ್ರೇಯಾ, ಪಿಸುಮಾತಿನಲ್ಲಿ ಕೇಳ್ತಾಳೆ‘ಅಮ್ಮಾ ನಾನು ಉಸಿರಾಡಿಸಬಹುದಾ?’<br />ಘಟನೆ ಎರಡು<br />ಏಳು ವರ್ಷದ ಸೌಮ್ಯಾ ಯಾವುದೋ ಪುಸ್ತಕವನ್ನು ಓದುತ್ತ ಕೂತಿದ್ದಳು. ಅವಳ ಅಮ್ಮ ಏನೋ ಕೆಲಸದಲ್ಲಿ ತಲ್ಲೀನರಾಗಿದ್ದರು. ಪುಸ್ತಕ ಓದುತ್ತಿದ್ದ ಸೌಮ್ಯಾಳಿಗೆ ಯಾವುದೋ ಸಮಸ್ಯೆ ಬಂತು. ಸರಿ ಅಮ್ಮನಲ್ಲಿಗೆ ಹೋಗಿ ‘ಅಮ್ಮಾ ಎಂ.ಎಸ್ ಫುಲ್ಫಾರ್ಮ್ ಏನು?’ಎಂದು ಕೇಳಿದಳು.<br />‘ಎಂ.ಎಸ್ಸಾ? ಮೈಕ್ರೊಸಾಫ್ಟ್’ಎಂದು ಅಮ್ಮ ಉತ್ತರ ನೀಡುತ್ತಾರೆ. ಮತ್ತೆ ಹಿಂತಿರುಗಿ ತನ್ನ ಜಾಗಕ್ಕೆ ಹೋಗಿ ಓದಲು ಕುಳಿತ ಸೌಮ್ಯಾ ಜೋರಾಗಿ ಹೇಳಿಕೊಳ್ಳುತ್ತಾಳೆ‘ಮೈಕ್ರೊಸಾಫ್ಟ್ ಧೋನಿ ಇಸ್ ಅ ಫೇಮಸ್ ಕ್ರಿಕೆಟರ್.....’sumanalaxmishhttp://www.blogger.com/profile/09262148243475906419noreply@blogger.com2tag:blogger.com,1999:blog-1178929771589486883.post-27519329500084377432011-04-20T04:15:00.000-07:002011-04-20T04:18:52.443-07:00ದೇವರ ನಿದ್ದೆದೇವರ ನಿದ್ದೆ<br /><br />ಚೆಂದ, ಮಧುರ ಹೂಗಳು ನನಗಿಲ್ಲಿ<br />ಭಾರವಾಗಿ ಕಾಡುತ್ತಿವೆ<br />ಹೂ ಮಾರುವವನ ಕರ್ಕಶ ದನಿಗೆ<br />ಹಾಲುಗಲ್ಲದ ಕಂದ ಬೆಚ್ಚಿ ಅಳುವಾಗ<br /><br />ಇಂಡಿಯಾದ ವಿಜಯವೂ ನನಗೆ ಅಪ್ರಸ್ತುತ<br />ಅಬ್ಬರದ ದೇಶಪ್ರೇಮಕ್ಕೆ, ಮಧ್ಯರಾತ್ರಿಯ ಹರುಷಕ್ಕೆ<br />ತತ್ತರಿಸುವ ಹಸುಳೆಯ ನಿದ್ದೆಗಣ್ಣಿನ<br />ಆಕ್ರಂದನ ನನ್ನೆದೆಯಲ್ಲಿ<br /><br />ಕೂಸಿಗೆ ನೆಮ್ಮದಿಯ ನಿದ್ದೆ<br />ನೀಡಲೂ ನನ್ನಿಂದ ಸಾಧ್ಯವಿಲ್ಲವೆಂಬ<br />ಹತಾಶೆ ಕಾಡುವಾಗ ನಶೆಯೇರಿದ ನಗರಕ್ಕೆ<br />ಹಿಡಿಶಾಪ ಹಾಕುತ್ತೇನೆ<br /><br />ಬಯಲೇ ಸಿಗದ ಯಾನಕ್ಕೂ<br />ಲಯವೇ ಇಲ್ಲದ ಬದುಕಿಗೂ<br />ಸಂಬಂಧ ಕಲ್ಪಿಸಿ ನರಳುತ್ತೇನೆ<br />ರಾತ್ರಿ ರಾತ್ರಿsumanalaxmishhttp://www.blogger.com/profile/09262148243475906419noreply@blogger.com0tag:blogger.com,1999:blog-1178929771589486883.post-57584300616533056632011-01-22T22:44:00.000-08:002011-01-22T23:04:00.028-08:00ಅವಳು ರಾಧೆ...ಮೀಸೆ ಮೂಡುವ ಮುನ್ನವೇ<br />ಮನಕದ್ದ ಚೋರ ಹತ್ತಾರು ಗೋಪಿಕೆಯರ<br />ನಲ್ಲ ಎಂದರೂ ಅಚಲ ವಿಶ್ವಾಸ ಅವಳದ್ದು.<br /><br />ಹದಿನಾರು ಸಾವಿರ ಹೆಂಡಿರ<br />ಸೆರಗಿನಡಿ ಬೆಚ್ಚಗಿದ್ದ ಆ ಜೀವವೂ<br />ಈ ವಿರಹಕ್ಕೆ, ಕಾಯುವಿಕೆಗೆ ಸೋತಿತ್ತು.<br /><br />ಅವನ ಪಾದದ ಮೇಲೆ ಅವಳ ಕಂಬನಿ<br />ಅವನೆದೆಯಲ್ಲಿ ಅವಳ ಚಿತ್ರ<br />ಅವಳ ಬದುಕಲ್ಲಿ ಅವನಿಲ್ಲ ಎಂದವರು ಯಾರು?<br /><br />ಅಷ್ಟಕ್ಕೂಅವಳಿಗೆ ಅವನು ಬೇಕಿಲ್ಲ<br />ನೆನಪೊಂದೇ ಸಾಕು<br />ಜೀವನವಿಡೀ ಬೇಯಲು.sumanalaxmishhttp://www.blogger.com/profile/09262148243475906419noreply@blogger.com3tag:blogger.com,1999:blog-1178929771589486883.post-87702573146200071142011-01-19T23:16:00.000-08:002011-01-20T00:01:05.291-08:00ನಾನು ಸೀತೆಯಲ್ಲ<span style="font-family: trebuchet ms;">ನನ್ನ ತಿರಸ್ಕಾರ</span> ಇರುವುದು ನಿನ್ನ ಮೇಲಲ್ಲ<br />ಖುದ್ದು ನನ್ನ ಮೇಲೆಯೂ ಅಲ್ಲ<br />ಸೊಕ್ಕಿ ನಿಂತ ನನ್ನ ದೇಹದ ಮೇಲೆ<br />ಅದರೆಡೆಗಿನ ನಿನ್ನ ಮೋಹದ ಮೇಲೆ<br /><br />ನಿನ್ನ ಹೆಜ್ಜೆಯ ಜಾಡನ್ನು ಅನುಸರಿಸಿ<br />ನನ್ನ ಬಯಕೆಗಳು ಬಸವಳಿದಿವೆ<br />ನಾನಲ್ಲ, ತಪ್ಪು ತಿಳಿಯಬೇಡ<br /><br />ನಿನ್ನ ಪಾದದಡಿಯ ಧೂಳು ಆಗಲು<br />ನಾನು ಸೀತೆಯಲ್ಲ, ನೀನು ರಾಮನೂ ಅಲ್ಲ<br />ಜಗದ ಕಣ್ಣಿಗೆ ಅಮರರಾಗುವುದು ನನಗೆ ಬೇಕಿಲ್ಲ<br /><span></span>sumanalaxmishhttp://www.blogger.com/profile/09262148243475906419noreply@blogger.com1tag:blogger.com,1999:blog-1178929771589486883.post-38089996093331751872011-01-18T21:22:00.000-08:002011-01-21T22:01:04.853-08:00ಈ ಕ್ಷಣ...<span style="font-family:verdana;"></span>ಯಾರಯಾರನ್ನೋ ಕಾಡಿ ಬೇಡಿ ತಂದ ಕನಸುಗಳು<br />ಬಹುಕಾಲ ಉಳಿಯುವುದಿಲ್ಲವೆಂಬ ಸತ್ಯ<br />ನನಗಾಗ ಗೊತ್ತಿರಲಿಲ್ಲ<br />ಈಗ ಜಗವೇ ಕತ್ತಲಾಗಿದೆ<br />ತಡಕಾಡಿದರೆ ಪಕ್ಕದಲ್ಯಾರೂ ಇಲ್ಲ.<br /><br />ಪ್ರೀತಿಗೆ ದೇಹದ ಹಂಗಿಲ್ಲ<br />ಎಂದವನ ಕೇಳಬೇಕಿದೆ<br />ನಿನ್ನ ಇಡೀ ಅಸ್ತಿತ್ವವನ್ನೇ ಆರಾಧಿಸುವಾಗ<br />ದೇಹವೊಂದನ್ನು <span>ದೂರ </span>ಇಡಲೇ ಎಂದು.<br />ನನ್ನ ಇಬ್ಬಗೆ ನೋಡಿ ದೂರದ ಕೃಷ್ಣ ಓಡಿಬರುವನೇ?<br /><br />ಆ ಶಿಖರದಲ್ಲಿ ಸಂಧಿಸೋಣ ಎಂದವನ ಪತ್ತೆಯಿಲ್ಲ<br />ಬಹಳ ಕಾಲವಾಯಿತು<br />ತುದಿ ಏರಬಲ್ಲೆ..ಗುರಿ ತಲುಪಬಲ್ಲೆ<br />ಅವನಿಗಾಗಿ ಏನೂ ಮಾಡಬಲ್ಲೆ<br />ಎಂದವನಿಗೆ ಗೊತ್ತಿತ್ತಾ?<br /><br />ಆಸೆಯೂ ಇರಲಿ, ದುಃಖವೂ ಬರಲಿ<br />ಈ ಹಾದಿಯಲ್ಲಿ ಬೇರೆ ಯಾರೂ ಬರದಿರಲಿ<br />ಹತ್ತಾರು ಜನ್ಮ ಬೇಗೆಯಲ್ಲೇ ಇರಬಲ್ಲೆ<br />ಕ್ಷಣ ಕಾಲದ ಸುಖವೇ ಸಾಕು ಬದುಕಿಗೆ<br />ಸುಖ ಕ್ಷಣಿಕ ಎಂದವರು ಯಾರು ?<br /><br /><br /><br /><br /><br /><br /><br /><br /><span style="font-family:arial;"></span>sumanalaxmishhttp://www.blogger.com/profile/09262148243475906419noreply@blogger.com1tag:blogger.com,1999:blog-1178929771589486883.post-52033762125807441182009-09-21T04:45:00.000-07:002009-09-21T04:47:13.761-07:00ಬಪ್ಪ...<span style="color: rgb(255, 102, 0); font-weight: bold;">ಬಪ್ಪ..</span> ಎಲ್ಲರ ಕಣ್ಣಿಗೆ ದೊಡ್ಡ ಹೆಗಡೇರು. ನಮಗೆಲ್ಲ ಮಗಾ ಮಗಾ ಎನ್ನುವ ಸ್ನೇಹಜೀವಿ. ಮಕ್ಕಳನ್ನು ಕಂಡರೆ ಅದೇನು ವಾತ್ಸಲ್ಯವೋ?..ಮಗಳೇ, ಮಗಾ ಎಂದೇ ನಮ್ಮನ್ನು ಮಾತನಾಡಿಸುತ್ತಿದ್ದ ಬಪ್ಪ ನಮ್ಮದೇ ಅಪ್ಪಂದಿರ ಹತ್ತಿರ ಮಾತ್ರ ಹೆಚ್ಚಾಗಿ ದ್ವೇಷವನ್ನೇ ಸಾಸಿದವ...ತನ್ನ ಸರೀಕರಲ್ಲಿ ಯಾವತ್ತೂ ಜಗಳ ಕಾಯ್ದುಕೊಂಡಿದ್ದವ.<br />ಪ್ರಾಯಕಾಲದಲ್ಲಿ ದೊಡ್ಡ ಅಡಿಕೆ ಮೂಟೆಯನ್ನು ಒಬ್ಬನೇ ಹೊರುತ್ತಿದ್ದನಂತೆ...ಇಡೀ ತೋಟವನ್ನು ಒಬ್ಬನೇ ಹದ ಮಾಡಿದ್ದನಂತೆ. ಸಿಟ್ಟು ಬಂದಾಗ ಮಗು ಎಂಬುದನ್ನು ನೋಡದೇ ಅವನದ್ದೇ ಮಗನನ್ನು ಅಂಗಳಕ್ಕೆ ತೆಗೆದು ಬಿಸಾಕಿದ್ದನಂತೆ..ಎಂಬಿತ್ಯಾದಿ ಅವನ ಕುರಿತಾಗಿದ್ದ ಕಥೆಗಳು ರೋಚಕವೆನಿಸುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸುಮಾರು ೬೫ ದಾಟಿದ ಬಳಿಕವೂ ರಾತ್ರಿ ಹೊತ್ತು ತೋಟಕ್ಕೆ ಹೋಗಿ ಬರುತ್ತಿದ್ದುದನ್ನು ನಾವೇ ಕಂಡಿದ್ದರಿಂದ ಭಾರೀ ಸಾಹಸಿ ಎಂದು ಎಂದೇ ಭಾವಿಸಿದ್ದೆವು.<br />ಹೇಳಿಕೊಳ್ಳುವಂತ ಸಿರಿವಂತರೇನೂ ಅಲ್ಲದಿದ್ದರೂ ದೊಡ್ಡಸ್ತಿಕೆ ತೋರುವುದರಲ್ಲಿ ಬಪ್ಪ ಎಂದಿಗೂ ಹಿಂದೇಟು ಹಾಕುತ್ತಿರಲಿಲ್ಲ. ಅದಕ್ಕಾಗಿಯೇ ಊರಿನಲ್ಲಿ ಒಂದು ವಿಶಿಷ್ಟ ಸ್ಥಾನ ಕಾಪಾಡಿಕೊಂಡಿದ್ದ ಎಂದರೂ ಸರಿ. ಅಪ್ಪ ಹಾಗೂ ಚಿಕ್ಕಪ್ಪನಲ್ಲಿ ಹಲವಾರು ಬಾರಿ ಜಗಳ ಕಾಯ್ದುಕೊಂಡು, ಕತ್ತಿ ತೆಗೆದು ಹೊಡೆಯಲು ಹೊರಟಿದ್ದನ್ನು ನಾವೇ ಎಷ್ಟೋ ಸಲ ನೋಡಿದ್ದೆವು. ಆಗೆಲ್ಲ ಅವನ ಬಗ್ಗೆ ಒಂದು ಬಗೆಯ ಭಯವಾಗುತ್ತಿತ್ತು. ಜಗಳವಾದ ಮಾರನೇ ದಿನವೇ ಮಗಳೇ ಎಂದು ಆತ್ಮೀಯವಾಗಿ ಕರೆದು, ನಿನ್ನೆಯಷ್ಟೇ ಅಪ್ಪನೊಂದಿಗೆ ಕಿತ್ತಾಡಿದ ಬಪ್ಪ ಇವನೇನಾ ಅನ್ನಿಸುವಂತೆ ಮಾಡಿಬಿಡುತ್ತಿದ್ದ.<br />ಅವನೊಂದಿಗೆ ಚಹಾ ಕುಡಿಯಲು, ತಂಬಾಕಿನ ಕವಳ ಹಾಕಲು ನಾನು ಎಷ್ಟೋ ಬಾರಿ ಜತೆಗಾರ್ತಿಯಾಗಿರುತ್ತಿದ್ದೆ. ತಂಬಾಕು ತಿನ್ನಬೇಡ ಎಂದು ಅಪ್ಪ ಬೈಯ್ದು, ಹೊಡೆದರೂ ಸಣ್ಣ ಎಲೆಯಲ್ಲಿ ಕವಳ ಮಾಡಿ ತಂಬಾಕು ಸೇರಿಸಿ ‘ಏನಾಗುವುದಿಲ್ಲ, ತಿನ್ನು. ನಾನಿಲ್ಲದಿದ್ದಾಗ ಒಬ್ಬಳೇ ತಿನ್ನಬೇಡ’ಎಂದು ಕೊಡುತ್ತಿದ್ದ ಬಪ್ಪನ ಪ್ರೀತಿಯನ್ನು ಅಲ್ಲಗಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಅವನೊಂದಿಗೆ ಚಹಾ ಕುಡಿದರೆ ಅಮ್ಮನಿಗೂ ಬೇಸರವಾಗುತ್ತಿತ್ತು. ‘ನಿಂಗೆ ಚಹಾ ರೂಢಿ ಮಾಡಿಬಿಡುತ್ತಾನೆ. ಆಮೇಲೆ ಬಿಡುವುದು ನಿಂಗೆ ಸಾಧ್ಯವಾಗುವುದಿಲ್ಲ’ಎಂಬ ಆಕ್ಷೇಪ ಅವಳದ್ದು. ಆದರೆ, ಹೈಸ್ಕೂಲು ಮೆಟ್ಟಿಲೇರುತ್ತಿದ್ದಂತೆ ನಾನು ತಂಬಾಕು ಬಿಟ್ಟೆ, ಜತೆಗೆ ಚಹಾವೂ ದೂರವಾಯಿತು ಎಂಬುದು ಬೇರೆ ಮಾತು.<br />ಅವಳು ಮಾದಿ. ಹಾಗೆಂದರೆ ಯಾರಿಗೂ ಅರ್ಥವಾಗುವುದಿಲ್ಲ. ಮತ್ತೀಗಾರ ಮಾದಿ ಎಂದರೆ ನಮ್ಮೂರಿನ ಎಲ್ಲರಿಗೂ ಆಕೆಯ ಚಿತ್ರಣ ತಕ್ಷಣ ಮೂಡುತ್ತದೆ. ಪೂರ್ತಿ ಹೆಸರು ಮಹಾದೇವಿ. ಯಾರು ಹಾಗೆ ಕರೆದರೋ ಗೊತ್ತಿಲ್ಲ, ಮಾದಿ ಎಂದೇ ಹೆಸರಾಗಿದ್ದು ನಿಜ. ಇಬ್ಬರು ಮಕ್ಕಳನ್ನು ಹೊಂದಿದ್ದ ಆಕೆಯ ಗಂಡ ಎಲ್ಲಿಗೆ ಹೋಗಿದ್ದ, ಏನು ಮಾಡುತ್ತಿದ್ದ ಎಂಬುದು ಬಹುಶಃ ಯಾರಿಗೂ ತಿಳಿದಿಲ್ಲ. ಬಪ್ಪನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಕೆ ನಾ ಕಂಡಂತೆ ತೀರ ಸರಳವಾಗಿಯೇ ಇದ್ದಳು. ಆದರೆ, ನನ್ನ ಆಯಿ, ಚಿಕ್ಕಮ್ಮ ಮುಂತಾದ ಹೆಂಗಸರ ‘ಒಂದು ರೀತಿಯ’ದೃಷ್ಟಿಗೆ ಆಕೆ ಯಾಕೆ ಕಾರಣಳಾಗಿದ್ದಳು ಎನ್ನುವುದು ನನಗೆ ಹೈಸ್ಕೂಲು ದಾಟಿದ ಬಳಿಕ ಅರಿವಾಯಿತು.<br />ಬಪ್ಪ ದಿನವೂ ರಾತ್ರಿ ಹೋಗುತ್ತಿದ್ದುದು ತೋಟ ಕಾಯುವ ಕೆಲಸಕ್ಕಲ್ಲ, ಅವಳ ಮನೆಗೆ ಎಂಬುದೂ ನಿಧಾನ ತಿಳಿಯಿತು. ಆಗ ಕೆಲವು ದಿನಗಳ ಕಾಲ ಈ ವಿಚಾರ ತಲೆಕೆಡಿಸುವ, ಆನಂತರ ತಮಾಷೆಯ ವಸ್ತುವಾಗಿದ್ದ ನಮಗೆ ಈಗ ಅದೇನೂ ದೊಡ್ಡದಾಗಿ ಕಾಣಿಸುತ್ತಿಲ್ಲ. ವಿಶೇಷವೆಂದರೆ, ಹಸುವಿನಂತಹ ದೊಡ್ಡಾಯಿ ಈ ವಿಚಾರ ತಿಳಿದಿದ್ದರೂ ಬಪ್ಪನ ಮೇಲೆ ಬೇಸರ ತೋರಿಸಿಕೊಂಡಿದ್ದನ್ನು ನಾವ್ಯಾರೂ ಕಂಡಿಲ್ಲ.<br />ವಿಷಾದವೆಂದರೆ, ಬಪ್ಪನಂತಹ ಗಂಡಸಿನ ಸ್ನೇಹ ಮಾಡಿಯೂ ಸಹ ಮಾದಿ ತನ್ನ ಮಗಳನ್ನು ಮದುವೆ ಮಾಡಲು ಸಾಹಸಪಟ್ಟಿದ್ದು ನಮ್ಮ ಕಣ್ಣೆದುರಿಗೇ ನಡೆದಿತ್ತು. ಬದುಕಿನುದ್ದಕ್ಕೂ ಜತೆಗಾತಿಯಾಗಿದ್ದ ಹೆಣ್ಣನ್ನು ಕಷ್ಟ ಬಂದಾಗ ಬಿಟ್ಟುಬಿಡುವುದು ಗಂಡಸಿಗೆ ಮಾತ್ರ ಸಾಧ್ಯವೇನೋ? ಆ ಕಾಲಕ್ಕೆ ಬಪ್ಪನೂ ಸಾಕಷ್ಟು ಹಣ್ಣಾಗಿದ್ದ. ಮನೆಯ ಆಡಳಿತದಲ್ಲಿ ಅವನ ಹಸ್ತಕ್ಷೇಪವಿರಲಿಲ್ಲ ಎನ್ನುವುದು ನಿಜವಾದರೂ, ಹಾಗೆ ಕಷ್ಟದಿಂದ ದೂರವಾಗಿ ನಿಂತಿದ್ದು ಮಾತ್ರ ಇವತ್ತಿಗೂ ಮನದ ಆಳದಲ್ಲಿ ಎಲ್ಲೋ ಎಚ್ಚರಿಕೆಯ ಗಂಟೆಯಾಗಿ ನಿಂತಿದೆ.sumanalaxmishhttp://www.blogger.com/profile/09262148243475906419noreply@blogger.com8tag:blogger.com,1999:blog-1178929771589486883.post-86144862543577323572009-09-21T04:43:00.000-07:002009-09-21T04:44:21.735-07:00ನಂಬಿ ಕೆಟ್ಟವರಿಲ್ಲ!ನಂಬಿ ಕೆಟ್ಟವರಿಲ್ಲ!<br /><br />ಯಾವುದೀ ರಾಗ?<br />ವಸಂತ ಮಾತ್ರವಲ್ಲ, ವರ್ಷವಿಡೀ<br />ಕೇಳಿದ್ದ ರಾಗ ಚಿರಪರಿಚಿತ.<br />ಹೆಸರು ಮಾತ್ರ ಗೊತ್ತಿಲ್ಲ.<br /><br />ರಾಗದ ಚೆಲುವು ನನಗಾಗಿ ಅಲ್ಲ..ವೆಂಬ ಸತ್ಯ ಗೊತ್ತಿದ್ದರೂ<br />ಚಂಚಲಗೊಳ್ಳುವ ಮನಸು.<br />ಹಾಡುತ್ತ ಹಾಡುತ್ತ..<br />ಮೋಡಿ ಮಾಡುವ ರಾಗಕ್ಕೆ ಮನ ಸೋಲದವರ್ಯಾರು?<br /><br />ಹಳೆಯ ರಾಗವಾದರೂ ಹೊಸತರಂತೆ ಹಾಡುವ ಕಲೆ<br />ಅದಕ್ಕೆ ಗೊತ್ತು.<br />ಹೇಳಿದ್ದನ್ನೇ ಹೇಳುತ್ತ..<br />ಹಾಡಿದ್ದನ್ನೇ ಹಾಡುತ್ತಿದ್ದರೂ ಮನ ಸೋತಿದೆ.<br /><br />ಮಧುರ ಕಂಠದಲ್ಲಿದೆ<br />ಹಳೆಯ ದಿನಗಳ ಮೆಲುಕು.<br />ರಾಗದಲ್ಲಿ ಎದೆಹಾಡು.<br />ಭಾವದಲ್ಲಿ ಮಾತ್ರ ಏನೋ ಅದಲು-ಬದಲು.<br /><br />ಅದು ಗಂಡು ಹಕ್ಕಿ.<br />ಹಾಡಿಗೆ, ರಾಗಕ್ಕೆ, ಬದಲಾವಣೆಗೆ<br />ಹೇಳಿಕೊಡಬೇಕೇ?<br />ದಿಕ್ಕು ತಪ್ಪಿಸುವ ಹಕ್ಕಿ.sumanalaxmishhttp://www.blogger.com/profile/09262148243475906419noreply@blogger.com4tag:blogger.com,1999:blog-1178929771589486883.post-17892157809561024992009-08-04T03:48:00.000-07:002009-08-04T03:50:06.998-07:00ಕೆಪ್ಪ...ಕೆಪ್ಪ...<br />ಅದ್ಯಾರು ಹೆಸರಿಟ್ಟರೋ? ಅದಕ್ಕೆ ತಕ್ಕಂತೆ ಕಿವುಡೇ ಆಗಿದ್ದ. ಅಥವಾ ಅವನ ಕಿವುಡನ್ನೇ ನೋಡಿ ಆ ಹೆಸರು ಬಂತೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಹುಟ್ಟಿದಾಗಿನಿಂದ ಕಂಡ ಜೀವಗಳಲ್ಲಿ ಅದೂ ಒಂದು. ದೊಡ್ಡಪ್ಪನ ಮದುವೆಯಾಗಿ ದೊಡ್ಡ ಸಂಸ್ಥಾನದಂಥ ಮನೆಗೆ ದೊಡ್ಡಾಯಿ ಬರುವಾಗ ಆಕೆಯ ತವರಿನವರು ಹಸುವನ್ನು ಹೊಡೆದು ಕಳುಹಿಸುವಂತೆ ಅವನನ್ನು ಕಳುಹಿಸಿದ್ದರು. ಹಾಗೆ ಬಂದ ಜೀವ ಕಡಿಮೆಯೆಂದರೂ ಐವತ್ತು ವರ್ಷಗಳ ಕಾಲ ನಮ್ಮ ಮನೆಯಲ್ಲೇ ಇತ್ತು ಎಂಬುದನ್ನು ನೆನೆದುಕೊಂಡರೆ..ಕಾಲವಾಗಿ ನಾಲ್ಕಾರು ವರ್ಷಗಳ ಬಳಿಕ ಇತ್ತೀಚೆಗೆ ಕೆಪ್ಪ ಬದುಕಿದ ರೀತಿ ಯಾಕೋ ಗಾಢವಾಗಿ ತಾಕುತ್ತಿದೆ.<br />ಮಳೆ, ಚಳಿ, ಬಿಸಿಲೆನ್ನದೇ ಬೆಳಗ್ಗೆ ಬೇಗ ಎದ್ದು ಸೊಪ್ಪು ತರುವುದು, ಕೊಟ್ಟಿಗೆ ನಿಗಾ ಇಡುವುದು, ಮಣ್ಣು ಹೊರುವುದು ಒಟ್ಟಿನಲ್ಲಿ ಆಯಾ ಕಾಲದ ಕೆಲಸಗಳಿಗೆ ಎಂದೂ ಕೊರತೆಯಿಲ್ಲ. ಅದಕ್ಕೇ ಕೆಪ್ಪನಿಗೆ ಮೈ ಕಸುವು ಕಡಿಮೆಯಾದಾಗ ದೊಡ್ಡಪ್ಪ ಕೆಲಸ ಸಾಗದೆಂದು ಹಾರಾಡುತ್ತಿದ್ದ. ಚಹಾ, ತಿಂಡಿ, ತಂಗಳನ್ನದ ಊಟದ ಜತೆಗೆ ರಾತ್ರಿಯವರೆಗೂ ಮೈಮುರಿಯುವಂಥ ದುಡಿತ. ರಾತ್ರಿ ತನ್ನ ಪಾಡಿಗೆ ಬೀಡಿ ಎಳೆಯುತ್ತಾ, ಆಕಾಶ ನೋಡುತ್ತಾ ಮಲಗುತ್ತಿದ್ದ ಕೆಪ್ಪ ಅಂದು ಮನುಷ್ಯನೆಂದೇ ಅನಿಸಿರಲಿಲ್ಲ. ಕಂಡಾಗಿನಿಂದ ಬೊಚ್ಚು ಬಾಯಲ್ಲೇ ಇದ್ದ ಕಪ್ಪು ಮೈನ ಕೆಪ್ಪ, ಕೊಟ್ಟಿಗೆಯ ಒಂದು ಪಕ್ಕದಲ್ಲಿ ದನ ಕರುಗಳ ಜೊತೆಗೇ ಮಲಗುತ್ತಿದ್ದುದು. ಅಲ್ಲೇ ಅವನ ಮಂಚ. ಅದರ ಮೇಲೆ ನೇತಾಡುತ್ತಿದ್ದ ಕತ್ತಿ..ಕುಡುಗೋಲು..<br />ದೊಡ್ಡಪ್ಪನ ದೊಡ್ಡಸ್ತಿಕೆ ಜತೆಗೆ ಸ್ವಲ್ಪ ಅತಿ ಅನಿಸುವಂತ ಸಿಟ್ಟು ಸಹಿಸಿಕೊಂಡು, ವರ್ಷಕ್ಕೆರಡು ಬಾರಿ ಪಿತ್ಥ ನೆತ್ತಿಗೇರಿ ಹೊಡೆದರೆ ಹೊಡೆಸಿಕೊಂಡು..ಹುಂ ಹುಂ.. ಎಂದು ಮುಲುಗುಟ್ಟುತ್ತಿದ್ದುದು ಈಗಲೂ ಕಿವಿಗೆ ಕೇಳಿಸಿದಂತಾಗುತ್ತದೆ. ಕೈ-ಬಾಯಿ ಸನ್ನೆಯಲ್ಲೇ ಎಲ್ಲ ಅರ್ಥೈಸಿಕೊಳ್ಳುತ್ತಿದ್ದವ, ಮಕ್ಕಳು ಏನಾದರೂ ಛೇಡಿಸಿದರೆ ಬೊಚ್ಚು ಬಾಯಿ ಬಿಟ್ಟುಕೊಂಡು ನಗುತ್ತಿದ್ದ. ಯಾವತ್ತೂ ಅವನನ್ನು ನಾವು ವಿಶ್ವಾಸಕ್ಕೆ ಪಾತ್ರವೆಂದು ಪರಿಗಣಿಸಿಯೇ ಇರಲಿಲ್ಲ. ಆದರೆ, ಅವನಿಗೆ ಅನ್ನ, ತಿಂಡಿ ಕಡಿಮೆ ಕೊಡುತ್ತಾರೆಂದು ಅನ್ನಿಸಿದರೆ, ಬೇಜಾರಾಗುತ್ತಿತ್ತು. ಯಾಕೀಗೆ? ಎನಿಸುತ್ತಿತ್ತು. ಆಯಿ ಹತ್ತಿರ ಹೇಳಿ ‘ನೀನಾದರೂ ಕೊಡು’ ಎಂದರೆ, ‘ಅಯ್ಯೋ ದೊಡ್ಡಪ್ಪ ಬೈಯುತ್ತಾರೆ’ಎಂದು ಹಿಂಜರಿಯುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಏನಾದರೂ ನೀಡುತ್ತಿದ್ದಳು.<br />ಅಕ್ಟೋಬರ್ ತಿಂಗಳ ರಜೆಯಲ್ಲಿ ಆಟದ ಹಾಣೆಗಿಂಡು ಕೆತ್ತಿಕೊಡಲು ನೆರವಾಗುತ್ತಿದ್ದ ಕೆಪ್ಪ. ಮಿರಿ ಮಿರಿ ಮಿಂಚುವ ಕತ್ತಿ ತಾನು ಹರಿತವೆಂದು ತೋರುತ್ತಿದ್ದರೆ ಸರಸರನೆ ಹಾಣೆಗಿಂಡು, ಕೋಲು ರೆಡಿಯಾಗುತ್ತಿತ್ತು. ಅಂಥ ಕೆಪ್ಪನಿಗೂ ಒಮ್ಮೊಮ್ಮೆ ಕೋಪ ಬಂದರೆ, ಜೋರಾಗಿ ಕಿರುಚಾಡುತ್ತಿದ್ದ. ದೊಡ್ಡಪ್ಪನ ಮೇಲೆ. ಏನು ಹೇಳುತ್ತಿದ್ದಾನೆ ಎಂಬುದೇ ತಿಳಿಯದ್ದರಿಂದ ಬಹುಶಃ ಅಷ್ಟು ವರ್ಷ ಅಲ್ಲಿರಲು ಸಾಧ್ಯವಾಯಿತು.<br />ನನ್ನನ್ನು ಆಗಾಗ ಕಂಗಾಲು ಮಾಡುವ ವಿಚಾರವೆಂದರೆ, ಅವನಿಗೂ ಒಮ್ಮೆ ಮದುವೆಯಾಗಿತ್ತು..ಮಕ್ಕಳಿದ್ದರು ಎನ್ನುವುದು. ಮದುವೆಯಾಗಿ, ಮಕ್ಕಳಿದ್ದವನನ್ನು ಇನ್ನೊಬ್ಬರ ಸಂಸಾರಕ್ಕೆ ಕೆಲಸ ಮಾಡಿಕೊಡಲು ಕಳುಹಿಸಿದ್ದರೆಂಬ ವಿಚಾರ ಬುದ್ಧಿ ಬಲಿಯುತ್ತಿದ್ದಂತೆ ನಮಗೆ ತಿಳಿದಿತ್ತು. ಹೇಗೆ ಹೆಂಡತಿ, ಮಕ್ಕಳನ್ನು ಬಿಟ್ಟು ಬಂದ ಎಂಬುದು ನಿಗೂಢ. ಅಥವಾ ಪರಿಸ್ಥಿತಿಯೇ ಹಾಗಿರಲೂ ಸಾಧ್ಯವಿತ್ತು. ಕೆಲವೊಮ್ಮ ಅವನ ಮಗಳು ಅಪ್ಪನನ್ನು ನೋಡಿಕೊಂಡು ಹೋಗಲು ಬರುತ್ತಿದ್ದಳು. ಕೆಲವು ನಿಮಿಷಗಳ ಮಾತುಕತೆ ಅಷ್ಟೆ. ಕೊಟ್ಟಿಗೆಯ ಅವನ ಹಾಸಿಗೆಯ ಮೇಲೆ ಕುಳಿತೇ ಆಡುವ ಮಾತುಕತೆ. ಆಗೆಲ್ಲ ನಾವು ಯಾರಾದರೂ ಸಿಕ್ಕರೆ, ‘ತನ್ನ ಮಗಳು’ ಎಂಬಂತೆ ಖುಷಿಯಿಂದ ಸನ್ನೆ ಮಾಡಿ ತೋರಿಸುತಿದ್ದುದು ಈಗ ಯಾಕೋ ಎದೆಯನ್ನು ಒದ್ದೆ ಮಾಡುತ್ತಿದೆ.<br />ದೊಡ್ಡಾಯಿ ಸತ್ತ ಬಳಿಕ ಅವನಿಗೆ ಈ ಮನೆಯಲ್ಲಿ ತನ್ನವರು ಯಾರೂ ಇಲ್ಲವೆಂದು ಅನಿಸುತ್ತಿತ್ತೋ ಏನೋ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಅವನಿಗೂ ವಯಸ್ಸಾಗಿತ್ತು. ದೊಡ್ಡಪ್ಪನೂ ಸೊಸೆಯ ಆಡಳಿತದಲ್ಲಿ ಮೆದುವಾಗಿದ್ದ. ಅಷ್ಟು ವರ್ಷ ದುಡಿಸಿಕೊಂಡು, ಕನಿಷ್ಟವೆಂದರೂ ಐವತ್ತು ವರ್ಷ ಕಾಲ ಲಕ್ಷಾಂತರ ರೂ.ದುಡಿದಿದ್ದ ಕೆಪ್ಪ ಮನೆಯಿಂದ ಹೊರಬಿದ್ದಿದ್ದ. ಅಲ್ಪ, ಸ್ವಲ್ಪ ಹಣ ನೀಡಿದ್ದರು ಎಂಬ ಸುದ್ದಿಯುತ್ತು. ಆದರೆ, ನ್ಯಾಯವಂತೂ ಸಿಗುವ ಸಾಧ್ಯತೆಯೇ ಇರಲ್ಲ. ಹತ್ತಿರದ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸಿ, ನಾವು, ನಮ್ಮ ಮನೆಯವರು ಕಂಡಾಗ ನಕ್ಕು, ಕೈ ಬಾಯಿ ಸನ್ನೆಗಳ ಮೂಲಕ ತನ್ನದೇ ಭಾಷೆಯಲ್ಲಿ ಆತ್ಮೀಯತೆ ತೋರುತ್ತಿದ್ದ ಕೆಪ್ಪ ಸತ್ತಾಗ ಮಣ್ಣು ಮಾಡಲು ಯಾರೂ ಇರಲಿಲ್ಲ. ಎಲ್ಲರ ಜೀವನದ ಅಂತಿಮ ರಹಸ್ಯವೂ ಇದೇ ಇರಬಹುದೇ?<br />ತಾಯಿಯಾಗುವ ಹಂತದಲ್ಲಿರುವ ನನಗೀಗ ಕೆಪ್ಪನಲ್ಲೂ ಅಪ್ಪ ಕಾಣಿಸುತ್ತಾನೆ.sumanalaxmishhttp://www.blogger.com/profile/09262148243475906419noreply@blogger.com2tag:blogger.com,1999:blog-1178929771589486883.post-12217000201516974342009-07-25T04:49:00.000-07:002009-07-25T05:03:57.104-07:00ಹಾಗೆ ಬಾ ದಾರಿಗೆಹಾಗೆ ಸುಮ್ಮನೆ ಬಂದು ಹೋಗುವವರ ಮಧ್ಯೆ ಇವನದ್ದೊಂದು ಕಾಟ<br />ಹೋಗು ಎಂದರೆ ಹೋಗಲೊಲ್ಲ ಇರು ಎನ್ನುವ ತಾಕತ್ತು ನನ್ನಲ್ಲಿಲ್ಲ<br />ಸುಮ್ಮನೆ ನಡೆದಿದ್ದರೆ ಇವನಿಗೇನಾಗುತ್ತಿತ್ತು?<br />ನೆನಪು ಮರೆಯುವ ಹೊತ್ತು ಇದಾಗಿತ್ತು ಎನ್ನಲು ಬಾಯೇ ಬರದು.<br /><br />ಕಪ್ಪು-ಬಿಳುಪು ಕ್ಯಾನ್ವಸಿನಲ್ಲಿ ಬಣ್ಣದ ಚಿತ್ರಗಳು<br />ಎಷ್ಟೋ ಮಂದಿ ಕನವರಿಸಿದ್ದರು. ಅದ್ಯಾವ ಮಾಯೆ? ದಿಕ್ಕು ತಪ್ಪಿತ್ತು.<br />ನಂಬಿದ ಮನಸು ಒಪ್ಪಲು ಸಿದ್ಧವಿರಲಿಲ್ಲ<br />ವಿಸ್ಮಯ ಹುಟ್ಟಿಸುತ್ತ ಮಗ್ಗುಲು ಬದಲಿಸಿತ್ತು<br /><br />ಏನಾದರೇನಂತೆ ನೀ ನಡಿ ಎಂದರೆ ಇವ ಇಲ್ಲೇ.<br />ಕೆಸರು ಗುಂಡಿಗೆ ಇಳಿಯಬೇಡ ಎಂದರೆ ಅದೇ ರೋಮಾಂಚನ ಎಂದ<br />ಕೈ ಹಾಕಿದರೆ ಸೀದುಹೊಗುತ್ತೀ-ಭಯ ಹುಟ್ಟಿಸುವ ಯತ್ನ<br />ಕೇಳುತ್ತಿಲ್ಲ..ನಾ ಕಳೆದುಹೋಗುವ ಭಯ ಕಳಕೊಂಡೆ!sumanalaxmishhttp://www.blogger.com/profile/09262148243475906419noreply@blogger.com0tag:blogger.com,1999:blog-1178929771589486883.post-56541861955891316572009-07-23T08:11:00.000-07:002009-07-23T08:43:07.184-07:00ಹೊಸತು<span style="font-family:arial;">ಪ್ರತಿ</span><span style="font-family:arial;"> </span><span style="font-family:arial;">ತಿಂಗಳ</span><span style="font-family:arial;"> </span><span style="font-family:arial;">ಕಿಬ್ಬೊಟ್ಟೆ</span><span style="font-family:arial;"> </span><span style="font-family:arial;">ನೋವಿಗೆ</span><span style="font-family:arial;"> </span><span style="font-family:arial;">ಹೊಸತಾಗಿ</span><span style="font-family:arial;"> </span><span style="font-family:arial;">ಕರಗು</span><span style="font-family:arial;"> </span><span style="font-family:arial;">ಮಾರಾಯ</span> <span style="font-family:lucida grande;"></span><br /><span style="font-family:arial;">ಅಂದರೆ</span><span style="font-family:arial;"> </span><span style="font-family:arial;">ಇವನಿಗೆ</span><span style="font-family:arial;"> </span><span style="font-family:arial;">ಅಚ್ಚರಿ</span><span style="font-family:arial;"> </span><br />ಹೊಸತಾಗಿ ಪ್ರೀತಿಸಲು ಸಾಧ್ಯವೇ?<br />ನಿನ್ನ ಪ್ರತಿ ನಗುವಿಗೆ ನಾನು ಹೊಸ ನಗೆ ಸೇರಿಸುತ್ತೀನಲ್ಲೋ<br />ಭ್ರಮೆ ಹುಟ್ಟಿಸುವ ಮನಸು...<br />ಎಲ್ಲ ನನ್ನದೆಂಬ ಧಿಮಾಕಿನ ಮನಸು...<br />ದ್ರೋಹ ಬಗೆಯುವ ಮನಸು..<br />ಕಾಲ ಬುಡ ನೋಡಿಕೋ ಎಂದರೂ ಎಚ್ಚೆತ್ತುಕೊಳ್ಳದ ಮನಸು..<br />ಗಳೆಲ್ಲ ಒಮ್ಮೊಮ್ಮೆ ಹೊಸದಾಗಿ ಹುಟ್ಟಿಸುವ ಅಚ್ಚರಿಯಲ್ಲೇ ಬದುಕು<br />ಎಂದರೂ ಇವ ನಂಬಲೊಲ್ಲ<br />....<br />ಅವನೆದುರು ತೆರೆದುಕೊಂಡು ಇವನೆದುರು ಬಿಗಿದುಕೊಳ್ಳುವ<br />ಜೀವಕ್ಕೆ ..ಜೀವದೊಂದಿಗಿನ ಆಟಕ್ಕೆ ಪ್ರೀತಿ ನೆಪ.<br />ಹೊಸತಾಗಿ ಬದುಕುವ ಹಠಕ್ಕೆ<br />ಹೊಸತನ್ನು ಕಾಣುವ ನೋಟಕ್ಕೆ<br />ನೆನಪುಗಳ ಹಂಗಿಲ್ಲ.sumanalaxmishhttp://www.blogger.com/profile/09262148243475906419noreply@blogger.com2