ಹಾಗೆ ಸುಮ್ಮನೆ ಬಂದು ಹೋಗುವವರ ಮಧ್ಯೆ ಇವನದ್ದೊಂದು ಕಾಟ
ಹೋಗು ಎಂದರೆ ಹೋಗಲೊಲ್ಲ ಇರು ಎನ್ನುವ ತಾಕತ್ತು ನನ್ನಲ್ಲಿಲ್ಲ
ಸುಮ್ಮನೆ ನಡೆದಿದ್ದರೆ ಇವನಿಗೇನಾಗುತ್ತಿತ್ತು?
ನೆನಪು ಮರೆಯುವ ಹೊತ್ತು ಇದಾಗಿತ್ತು ಎನ್ನಲು ಬಾಯೇ ಬರದು.
ಕಪ್ಪು-ಬಿಳುಪು ಕ್ಯಾನ್ವಸಿನಲ್ಲಿ ಬಣ್ಣದ ಚಿತ್ರಗಳು
ಎಷ್ಟೋ ಮಂದಿ ಕನವರಿಸಿದ್ದರು. ಅದ್ಯಾವ ಮಾಯೆ? ದಿಕ್ಕು ತಪ್ಪಿತ್ತು.
ನಂಬಿದ ಮನಸು ಒಪ್ಪಲು ಸಿದ್ಧವಿರಲಿಲ್ಲ
ವಿಸ್ಮಯ ಹುಟ್ಟಿಸುತ್ತ ಮಗ್ಗುಲು ಬದಲಿಸಿತ್ತು
ಏನಾದರೇನಂತೆ ನೀ ನಡಿ ಎಂದರೆ ಇವ ಇಲ್ಲೇ.
ಕೆಸರು ಗುಂಡಿಗೆ ಇಳಿಯಬೇಡ ಎಂದರೆ ಅದೇ ರೋಮಾಂಚನ ಎಂದ
ಕೈ ಹಾಕಿದರೆ ಸೀದುಹೊಗುತ್ತೀ-ಭಯ ಹುಟ್ಟಿಸುವ ಯತ್ನ
ಕೇಳುತ್ತಿಲ್ಲ..ನಾ ಕಳೆದುಹೋಗುವ ಭಯ ಕಳಕೊಂಡೆ!
Saturday 25 July 2009
Subscribe to:
Post Comments (Atom)
No comments:
Post a Comment