Sunday 22 May 2011

ನೆಲೆ

ನನ್ನವನ ತೃಪ್ತಿ ಸಮಾಧಾನಗಳಲ್ಲಿ
ನಾನು ಕಾಣುವ ಕೊರತೆ
ನನ್ನ ಆಕಾಶದೆತ್ತರದ ಬಯಕೆಗಳಿಗೆ
ಅವನು ತೋರುವ ನಿರ್ಲಿಪ್ತತೆ
ಸದಾ ಹೊಸತರ ಬೆರಗನ್ನು ಬಯಸುವ
ನನ್ನ ಕಣ್ಣುಗಳು
ಏನೋ ಪಡೆದ ಆರಾಮದಲ್ಲಿ
ಕಳೆಗಟ್ಟುವ ಅವನ ಕಣ್ಣುಗಳು
ಎಲ್ಲದರಲ್ಲಿಯೂ ಕೊಂಕು
ಹುಡುಕುವ ಅವನು
ಜಗತ್ತಿನ ಹಸಿರೆಡೆಗೆ ದೃಷ್ಟಿ
ಹಾಯಿಸುವ ನಾನು....
ಎಲ್ಲೆಲ್ಲೂ ತಾಳಮೇಳವಿಲ್ಲದೇ ನಾ ಬಳಲಿದಾಗ
ಅವನೇ ತೋರಿಸುತ್ತಾನೆ
‘ಅಲ್ಲಿ ನೋಡು ಚಂದಿರ’.

ಯಾವುದು ಭರತ?
ಯಾವುದು ಇಳಿತ?
ನನ್ನ ಕನಸುಗಳೆತ್ತರ ಅವನು ಏರುವುದೋ?
ಅವನ ಶಾಂತಿಗೆ ನಾನು ತಲೆಬಾಗುವುದೋ?
ಮಗುವಾದ ಬಳಿಕ ಸ್ಮಾರ್ಟ್
‘ಒಂದು ಮಗು ಆಗಿದ್ದೇ ಆಗಿದ್ದು, ಎಷ್ಟು ಸೋಮಾರಿಯಾಗಿ ಜೀವನ ಕಳೆಯುತ್ತಿದ್ದ ಆಕೆ ಹೇಗೆ ಆಕ್ಟಿವ್ ಆಗಿಬಿಟ್ಟಿದ್ದಾಳೆ? ಇದೇ ಮಗುವಿನ ಮಹಿಮೆ’ ಎಂಬ ಡೈಲಾಗ್ ಅನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಆದರೆ, ಸ್ವಾಮಿ, ಅದು ಮಗುವಿನ ಮಹಿಮೆಯಲ್ಲ, ಅದು ಮೆದುಳಿನಲ್ಲಾದ ಬದಲಾವಣೆ.
ಮಗುವಾದ ಬಳಿಕ ಮಹಿಳೆ ಮೊದಲಿನಂತೆ ಇರಲು ಸಾಧ್ಯವೇ ಇಲ್ಲ ಬಿಡಿ. ಅದು ಎಲ್ಲರಿಗೂ ಗೊತ್ತು. ಮೊದಲಿನಂತೆ ಸೊಂಪಾಗಿ ನಿದ್ದೆ ಹೊಡೆಯಲು, ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸಲು ಆಗುವುದಿಲ್ಲ. ಬೇರೆಯವರನ್ನು ಅಷ್ಟೇ ಏಕೆ, ಗಂಡನನ್ನೂ ಸಹ ಸರಿಯಾಗಿ ವಿಚಾರಿಸಿಕೊಳ್ಳಲು ಆಗುವುದಿಲ್ಲ. ಅಷ್ಟು ಕೆಲಸದ ಹೊರೆ ಆಕೆಗೆ ಇರುತ್ತದೆ. ಇನ್ನು ಹೊರಗೆ ಕಚೇರಿಯಲ್ಲಿ ದುಡಿಯುವ ಮಹಿಳೆಯ ಪಾಡಂತೂ ಇನ್ನೂ ಗಂಭೀರ.
ಆದರೆ, ಇಷ್ಟೆಲ್ಲ ಜವಾಬ್ದಾರಿ ಹೊತ್ತುಕೊಳ್ಳುವ, ಕೆಲಸ ಮಾಡುವ ತಾಕತ್ತು ಆಕೆಗೆಲ್ಲಿಂದ ಬರುತ್ತದೆ? ಗೊತ್ತಾ? ಅದೇ ನಿಜವಾದ ಆಕೆಯ ಶಕ್ತಿಯ ಗುಟ್ಟು.
ಗರ್ಭಿಣಿಯಿದ್ದಾಗ ಹಾರ್ಮೋನ್‌ಗಳಲ್ಲಿ ಆಗುವ ಬದಲಾವಣೆಗಳಿಂದ ಮಗು ಹುಟ್ಟಿದ ಬಳಿಕ ಮಹಿಳೆಯ ಮೆದುಳಿನ ನಿರ್ದಿಷ್ಟ ಭಾಗ ಸ್ವಲ್ಪ ದೊಡ್ಡದಾಗುತ್ತದೆ. ಅದರಿಂದಲೇ ಇಷ್ಟೆಲ್ಲ ಸಾಧ್ಯವಾಗುತ್ತದೆ.
ಕ್ರಿಯಾಶೀಲವಾಗಿ ಚಿಂತಿಸುವ, ಸೂರ್ತಿ ಪಡೆಯುವ, ನ್ಯಾಯಅನ್ಯಾಯಗಳ ವಿವೇಚನೆ ಮಾಡುವ ಹಾಗೂ ತೃಪ್ತಿ ಕಾಣುವ ಮೆದುಳಿನ ಭಾಗ ಹೆರಿಗೆ ನಂತರದ ದಿನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳವಣಿಗೆ ಆಗುತ್ತದೆ. ಇದನ್ನು ಯೇಲ್ ವಿಶ್ವವಿದ್ಯಾಲಯದ ತಜ್ಞರು ಪತ್ತೆ ಮಾಡಿದ್ದಾರೆ. ಹೀಗಾಗಿ ಎಲ್ಲವನ್ನೂ ನಿಭಾಯಿಸುವ, ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುವ ತಾಕತ್ತು ಆಕೆಗೆ ಬರುತ್ತದೆ.
ಹಾಗಾದ್ರೆ, ಸುಮ್ಮನೆ ತನ್ನ ಪಾಡಿಗೆ ತಾನಿರುವ, ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ಹುಡುಗಿ ನೋಡಿ ‘ಮಗುವಾದರೆ ಎಲ್ಲ ಸರಿ ಹೋಗುತ್ತೆ ಬಿಡಿ’ಎಂದು ರಾಗ ಹಾಡುವ ಹಿರಿಯರಿಗೆ ಈ ಗುಟ್ಟು ಗೊತ್ತಿದೆಯಾ? ಏನೋ ಗೊತ್ತಿಲ್ಲ.

ಫುಲ್ ಖುಷ್!
ಮಗುವಾದ ಬಳಿಕ ಅಮ್ಮ ಹೆಚ್ಚು ಸ್ಮಾರ್ಟ್ ಆಗುತ್ತಾಳೆ ಅಂತ ಒಂದು ಸಮೀಕ್ಷೆ ಹೇಳ್ತಾ ಇದ್ರೆ, ಇನ್ನೊಂದು ಅಧ್ಯಯನ ಆಕೆ ಹೆಚ್ಚು ಸಂತಸವಾಗಿಯೂ ಇರ‍್ತಾಳೆ ಅಂತ ಹೇಳ್ತಾ ಇದೆ. ಗೊತ್ತಾ?
ಮಗುವಿನ ಲಾಲನೆ-ಪಾಲನೆಯಲ್ಲಿ ನಿರತರಾಗುವ ಅಮ್ಮನ ಮೆದುಳು ಸಂತಸದಿಂದ ಬೀಗುತ್ತದೆಯಂತೆ. ಅದಕ್ಕೇ ಸಂತಸದ ಹಾರ್ಮೋನ್ ಹೆಚ್ಚಾಗಿ ಸ್ರವಿಕೆ ಆಗುತ್ತದೆಯಂತೆ. ಹಾಗಂತ ಬಿಹೇವಿಯರಲ್ ನ್ಯೂರೋ ಸೈನ್ಸ್ ಪತ್ರಿಕೆ ವರದಿ ಮಾಡಿದೆ.
ಮಗುವಿನ ಜವಾಬ್ದಾರಿ ಒಂದೆಡೆಯಾದರೆ, ಅದರ ಹತ್ತಾರು ಕೆಲಸ ಇನ್ನೊಂದೆಡೆ ಇರುತ್ತದೆ. ಆದರೂ ಆಕೆ ಬೇಸರಿಸಿಕೊಳ್ಳುವುದಿಲ್ಲ. ಮತ್ತು ಮಗುವಿನ ಪ್ರತೀ ಕೆಲಸ ಮಾಡುವಾಗಲೂ ಒಂದು ರೀತಿಯ ಸಂತಸ ಅನುಭವಿಸುತ್ತಾಳೆ. ಇದೇ ಆಕೆ ಹೆಚ್ಚು ಕಾಲ ಖುಷಿಯಾಗಿ ಇರುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.
ನಾವೆಷ್ಟು ಬೇಗ ಮೋಸ ಹೋಗುತ್ತೇವೆ?
ಆತ ಕ್ರಿಯಾಶೀಲ ಪ್ರಯೋಗಶಾಲಿ. ಹೆಸರು ಈಗಲ್ ರಾಕ್ ಜ್ಯೂನಿಯರ್ ಹೈ. ಪ್ರಯೋಗ ಮಾಡುತ್ತಲೇ ಇರುವುದು ಸ್ವಭಾವಸಿದ್ಧ ಹವ್ಯಾಸ.
ಜಂಕ್‌ಫುಡ್ ಹಾಗೂ ಕೆಲವು ರಸಾಯನಿಕಗಳ ಬಗ್ಗೆ ನಾವೆಷ್ಟು ಸೂಕ್ಷ್ಮರಾಗಿದ್ದೇವೆ ಎನ್ನುವುದನ್ನು ಆತ ಸಾಬೀತುಪಡಿಸಿದ ಆತನ ಪ್ರೊಜೆಕ್ಟ್‌ಗೆ ಪ್ರತಿಷ್ಠಿತ ಇಡಾಹೋ ಫಾಲ್ಸ್ ಸೈನ್ಸ್ ಫೇರ್‌ನಲ್ಲಿ ಮೊದಲ ಬಹುಮಾನ ಬಂತು.
ಆತನ ಪ್ರೊಜೆಕ್ಟ್ ವಿವರ ಹೀಗಿದೆ.
* ಒಂದು ರಸಾಯನಿಕವಿದೆ. ಅದರ ಹೆಸರು ಡಿಹೈಡ್ರೊಜೆನ್ ಮೊನೊಕ್ಸೈಡ್. ಅದರ ಹಾನಿಗಳು ಅಪಾರ.
* ಇದರಿಂದ ಅತಿಯಾದ ಬೆವರು ಬರುತ್ತದೆ ಮತ್ತು ವಾಕರಿಕೆಯೂ ಹೆಚ್ಚು.
* ಆಸಿಡ್ ಮಳೆಯಲ್ಲಿ ಇದರ ಅಂಶವೇ ಹೆಚ್ಚು.
* ಇದರೊಂದಿಗೆ ಇತರ ಅಂಶಗಳು ಸೇರಿದರೆ ಅನೇಕ ರೋಗಗಳೂ ಬರಬಹುದು.
* ಅಕಸ್ಮಾತ್ತಾಗಿ ಉಸಿರಿನೊಳಗೆ ಸೇರಿದರೆ ಸಾವು ಗ್ಯಾರೆಂಟಿ.
* ಭೂಸವೆತಕ್ಕೂ ಇದು ಪ್ರಮುಖ ಕಾರಣ.
* ಆಟೊಮೊಬೈಲ್‌ನ ಕಾರ್ಯಕ್ಷಮತೆ ಕುಂದಲು ಇದೇ ಕಾರಣ.
* ಕ್ಯಾನ್ಸರ್ ಗಡ್ಡೆಗಳಲ್ಲೂ ಇದು ಇರುತ್ತದೆ.

ಈಗ ಹೇಳಿ. ಈ ರಸಾಯನಿಕವನ್ನು ನಿಷೇಸುವುದೋ ಬೇಡವೋ ಎಂದು ಆತ ೫೦ ಜನರನ್ನು ಪ್ರಶ್ನಿಸಿದಾಗ ೪೩ ಮಂದಿ ನಿಷೇಸುವುದಕ್ಕೆ ಸಹಮತ ಸೂಚಿಸುತ್ತಾರೆ. ೬ ಮಂದಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನುಳಿದ ಒಬ್ಬರಿಗೆ ಮಾತ್ರ ಆ ಗುಟ್ಟು ಗೊತ್ತಿರುತ್ತದೆ.
ಅಷ್ಟಕ್ಕೂ ಆ ರಸಾಯನಿಕ ಯಾವುದು ಗೊತ್ತಾ? ನೀರು. ಈ ಪ್ರೊಜೆಕ್ಟ್‌ಗೇ ಆತ ಮೊದಲ ಬಹುಮಾನ ಪಡೆದಿದ್ದು. ಅದರ ಟೈಟಲ್ ‘ನಾವೆಷ್ಟು ಬೇಗ ಮೋಸ ಹೋಗುತ್ತೇವೆ?’ಎಂದು.