ಮೀಸೆ ಮೂಡುವ ಮುನ್ನವೇ
ಮನಕದ್ದ ಚೋರ ಹತ್ತಾರು ಗೋಪಿಕೆಯರ
ನಲ್ಲ ಎಂದರೂ ಅಚಲ ವಿಶ್ವಾಸ ಅವಳದ್ದು.
ಹದಿನಾರು ಸಾವಿರ ಹೆಂಡಿರ
ಸೆರಗಿನಡಿ ಬೆಚ್ಚಗಿದ್ದ ಆ ಜೀವವೂ
ಈ ವಿರಹಕ್ಕೆ, ಕಾಯುವಿಕೆಗೆ ಸೋತಿತ್ತು.
ಅವನ ಪಾದದ ಮೇಲೆ ಅವಳ ಕಂಬನಿ
ಅವನೆದೆಯಲ್ಲಿ ಅವಳ ಚಿತ್ರ
ಅವಳ ಬದುಕಲ್ಲಿ ಅವನಿಲ್ಲ ಎಂದವರು ಯಾರು?
ಅಷ್ಟಕ್ಕೂಅವಳಿಗೆ ಅವನು ಬೇಕಿಲ್ಲ
ನೆನಪೊಂದೇ ಸಾಕು
ಜೀವನವಿಡೀ ಬೇಯಲು.
Saturday 22 January 2011
Wednesday 19 January 2011
ನಾನು ಸೀತೆಯಲ್ಲ
ನನ್ನ ತಿರಸ್ಕಾರ ಇರುವುದು ನಿನ್ನ ಮೇಲಲ್ಲ
ಖುದ್ದು ನನ್ನ ಮೇಲೆಯೂ ಅಲ್ಲ
ಸೊಕ್ಕಿ ನಿಂತ ನನ್ನ ದೇಹದ ಮೇಲೆ
ಅದರೆಡೆಗಿನ ನಿನ್ನ ಮೋಹದ ಮೇಲೆ
ನಿನ್ನ ಹೆಜ್ಜೆಯ ಜಾಡನ್ನು ಅನುಸರಿಸಿ
ನನ್ನ ಬಯಕೆಗಳು ಬಸವಳಿದಿವೆ
ನಾನಲ್ಲ, ತಪ್ಪು ತಿಳಿಯಬೇಡ
ನಿನ್ನ ಪಾದದಡಿಯ ಧೂಳು ಆಗಲು
ನಾನು ಸೀತೆಯಲ್ಲ, ನೀನು ರಾಮನೂ ಅಲ್ಲ
ಜಗದ ಕಣ್ಣಿಗೆ ಅಮರರಾಗುವುದು ನನಗೆ ಬೇಕಿಲ್ಲ
ಖುದ್ದು ನನ್ನ ಮೇಲೆಯೂ ಅಲ್ಲ
ಸೊಕ್ಕಿ ನಿಂತ ನನ್ನ ದೇಹದ ಮೇಲೆ
ಅದರೆಡೆಗಿನ ನಿನ್ನ ಮೋಹದ ಮೇಲೆ
ನಿನ್ನ ಹೆಜ್ಜೆಯ ಜಾಡನ್ನು ಅನುಸರಿಸಿ
ನನ್ನ ಬಯಕೆಗಳು ಬಸವಳಿದಿವೆ
ನಾನಲ್ಲ, ತಪ್ಪು ತಿಳಿಯಬೇಡ
ನಿನ್ನ ಪಾದದಡಿಯ ಧೂಳು ಆಗಲು
ನಾನು ಸೀತೆಯಲ್ಲ, ನೀನು ರಾಮನೂ ಅಲ್ಲ
ಜಗದ ಕಣ್ಣಿಗೆ ಅಮರರಾಗುವುದು ನನಗೆ ಬೇಕಿಲ್ಲ
Tuesday 18 January 2011
ಈ ಕ್ಷಣ...
ಯಾರಯಾರನ್ನೋ ಕಾಡಿ ಬೇಡಿ ತಂದ ಕನಸುಗಳು
ಬಹುಕಾಲ ಉಳಿಯುವುದಿಲ್ಲವೆಂಬ ಸತ್ಯ
ನನಗಾಗ ಗೊತ್ತಿರಲಿಲ್ಲ
ಈಗ ಜಗವೇ ಕತ್ತಲಾಗಿದೆ
ತಡಕಾಡಿದರೆ ಪಕ್ಕದಲ್ಯಾರೂ ಇಲ್ಲ.
ಪ್ರೀತಿಗೆ ದೇಹದ ಹಂಗಿಲ್ಲ
ಎಂದವನ ಕೇಳಬೇಕಿದೆ
ನಿನ್ನ ಇಡೀ ಅಸ್ತಿತ್ವವನ್ನೇ ಆರಾಧಿಸುವಾಗ
ದೇಹವೊಂದನ್ನು ದೂರ ಇಡಲೇ ಎಂದು.
ನನ್ನ ಇಬ್ಬಗೆ ನೋಡಿ ದೂರದ ಕೃಷ್ಣ ಓಡಿಬರುವನೇ?
ಆ ಶಿಖರದಲ್ಲಿ ಸಂಧಿಸೋಣ ಎಂದವನ ಪತ್ತೆಯಿಲ್ಲ
ಬಹಳ ಕಾಲವಾಯಿತು
ತುದಿ ಏರಬಲ್ಲೆ..ಗುರಿ ತಲುಪಬಲ್ಲೆ
ಅವನಿಗಾಗಿ ಏನೂ ಮಾಡಬಲ್ಲೆ
ಎಂದವನಿಗೆ ಗೊತ್ತಿತ್ತಾ?
ಆಸೆಯೂ ಇರಲಿ, ದುಃಖವೂ ಬರಲಿ
ಈ ಹಾದಿಯಲ್ಲಿ ಬೇರೆ ಯಾರೂ ಬರದಿರಲಿ
ಹತ್ತಾರು ಜನ್ಮ ಬೇಗೆಯಲ್ಲೇ ಇರಬಲ್ಲೆ
ಕ್ಷಣ ಕಾಲದ ಸುಖವೇ ಸಾಕು ಬದುಕಿಗೆ
ಸುಖ ಕ್ಷಣಿಕ ಎಂದವರು ಯಾರು ?
ಬಹುಕಾಲ ಉಳಿಯುವುದಿಲ್ಲವೆಂಬ ಸತ್ಯ
ನನಗಾಗ ಗೊತ್ತಿರಲಿಲ್ಲ
ಈಗ ಜಗವೇ ಕತ್ತಲಾಗಿದೆ
ತಡಕಾಡಿದರೆ ಪಕ್ಕದಲ್ಯಾರೂ ಇಲ್ಲ.
ಪ್ರೀತಿಗೆ ದೇಹದ ಹಂಗಿಲ್ಲ
ಎಂದವನ ಕೇಳಬೇಕಿದೆ
ನಿನ್ನ ಇಡೀ ಅಸ್ತಿತ್ವವನ್ನೇ ಆರಾಧಿಸುವಾಗ
ದೇಹವೊಂದನ್ನು ದೂರ ಇಡಲೇ ಎಂದು.
ನನ್ನ ಇಬ್ಬಗೆ ನೋಡಿ ದೂರದ ಕೃಷ್ಣ ಓಡಿಬರುವನೇ?
ಆ ಶಿಖರದಲ್ಲಿ ಸಂಧಿಸೋಣ ಎಂದವನ ಪತ್ತೆಯಿಲ್ಲ
ಬಹಳ ಕಾಲವಾಯಿತು
ತುದಿ ಏರಬಲ್ಲೆ..ಗುರಿ ತಲುಪಬಲ್ಲೆ
ಅವನಿಗಾಗಿ ಏನೂ ಮಾಡಬಲ್ಲೆ
ಎಂದವನಿಗೆ ಗೊತ್ತಿತ್ತಾ?
ಆಸೆಯೂ ಇರಲಿ, ದುಃಖವೂ ಬರಲಿ
ಈ ಹಾದಿಯಲ್ಲಿ ಬೇರೆ ಯಾರೂ ಬರದಿರಲಿ
ಹತ್ತಾರು ಜನ್ಮ ಬೇಗೆಯಲ್ಲೇ ಇರಬಲ್ಲೆ
ಕ್ಷಣ ಕಾಲದ ಸುಖವೇ ಸಾಕು ಬದುಕಿಗೆ
ಸುಖ ಕ್ಷಣಿಕ ಎಂದವರು ಯಾರು ?
Subscribe to:
Posts (Atom)